ಹಬ್ಬಕ್ಕೆ ತರುತ್ತಿದ್ದ ಒಂಟೆಗಳ ರಕ್ಷಣೆ

ಭಾನುವಾರ, 3 ಜುಲೈ 2022 (08:04 IST)
ಆನೇಕಲ್ : ಬಕ್ರೀದ್ ಹಬ್ಬಕ್ಕೆಂದು ರಾಜಸ್ಥಾನದಿಂದ ಅಕ್ರಮವಾಗಿ ತರಲಾಗಿದ್ದ 18 ಒಂಟೆಗಳನ್ನು ರಕ್ಷಿಸಿದ ಘಟನೆ ರಾಜ್ಯ ಗಡಿಭಾಗ ಹೊಸೂರಿನಲ್ಲಿ ನಡೆದಿದೆ.

ಕೆಲ ದುಷ್ಕರ್ಮಿಗಳು ಬಕ್ರೀದ್ ಹಬ್ಬಕ್ಕೆಂದು 18 ಒಂಟೆಗಳನ್ನು ರಾಜ್ಯಕ್ಕೆ ಅಕ್ರಮವಾಗಿ ಸಾಗಿಸುವ ಪ್ರಯತ್ನದಲ್ಲಿದ್ದರು. ಆದರೆ ಕರ್ನಾಟಕದಲ್ಲಿ ಒಂಟೆಗಳ ಬಲಿ ನಿಷೇಧವಿದ್ದರಿಂದ ಗಡಿ ಭಾಗದಲ್ಲಿ ಪೊಲೀಸರು 24*7ಗಳ ಕಾಲ ಬಿಗಿ ಭದ್ರತೆ ಕೈಗೊಂಡಿದ್ದರು.

ಈ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ತರಲು ಸಾಧ್ಯವಾಗದೇ ಆ 18 ಒಂಟೆಗಳನ್ನು ತಮಿಳುನಾಡಿನ ಹೊಸೂರಿನಲ್ಲಿ ಅಕ್ರಮವಾಗಿ ಇರಿಸಲಾಗಿತ್ತು. ಅವೆಲ್ಲವನ್ನು ನಂತರ ದಿನಗಳಲ್ಲಿ ಅಕ್ರಮವಾಗಿ ಬೆಂಗಳೂರು ಸೇರಿದಂತೆ ಹಲವು ಕಡೆ ಸಾಗಿಸಲು ಹೊಂಚು ಹಾಕಲಾಗಿತ್ತು. 

ಅಕ್ರಮವಾಗಿ ಒಂಟೆಗಳ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಹೊಸೂರು ನಗರಪಾಲಿಕೆ ಅಧಿಕಾರಿಗಳ ಮತ್ತು ಪೊಲೀಸರು ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ