ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಶಶಿಕಲಾ ನಟರಾಜನ್ ನೀಡಿದ ಪ್ರತಿಕ್ರಿಯೆ ಇದು!

ಮಂಗಳವಾರ, 14 ಫೆಬ್ರವರಿ 2017 (11:34 IST)
ಚೆನ್ನೈ: ಆದಾಯ ಮೀರಿ ಆಸ್ಥಿ ಪ್ರಕರಣದಲ್ಲಿ ದೋಷಿ ಎಂದು ಸುಪ್ರೀಂ ಕೋರ್ಟ್ ತೀರ್ಪಿತ್ತ ಬೆನ್ನಲ್ಲೆ ಶಶಿಕಲಾ ನಟರಾಜನ್ ಪ್ರತಿಕ್ರಿಯಿಸಿದ್ದಾರೆ. ಅಂತಿಮವಾಗಿ ಧರ್ಮಕ್ಕೆ ಜಯ ಸಿಗುತ್ತದೆ ಎಂದಿದ್ದಾರೆ.

 
ಇದೆಲ್ಲಾ ನನಗೆ ಹೊಸದಲ್ಲ. ಸಾಕಷ್ಟು ಸಂಕಟ ಅನುಭವಿಸಿದ್ದೇನೆ. ಇದನ್ನೂ ಎದುರಿಸುತ್ತೇನೆ ಎಂದು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಮೊದಲ ಬಾರಿಗೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಆದರೆ ತಮ್ಮ ಮುಂದಿನ ನಡೆ ಏನು ಎಂಬುದರ ಬಗ್ಗೆ ಏನನ್ನೂ ಹೇಳಿಲ್ಲ. ಅತ್ತ ಪನೀರ್ ಸೆಲ್ವಂ ಬಣ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಈಗ ಶಶಿಕಲಾ ಮುಂಬರುವ ಸವಾಲುಗಳನ್ನು ಹೇಗೆ ಎದುರಿಸುತ್ತಾರೆಂದು ಕಾದು ನೋಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ