ಮನ್ದೀಪ್ ಸಿಂಗ್ ಹತ್ಯೆಗೆ ಪ್ರತೀಕಾರ: 1 ತಲೆಗೆ 10ಲ್ಲ 40 ರುಂಡ ಚೆಂಡಾಡಿದ ಸೇನೆ

ಶನಿವಾರ, 5 ನವೆಂಬರ್ 2016 (12:53 IST)
ಯೋಧ ಮನ್ದೀಪ್ ಸಿಂಗ್ ಅವರ ಕ್ರೂರವಾಗಿ ಹತ್ಯೆಗೆ ಪ್ರತೀಕಾರವನ್ನು ತೆಗೆದುಕೊಳ್ಳಬೇಕು. ಒಂದು ತಲೆಗೆ ಬದಲಾಗಿ ನಾವು 10 ತಲೆಯನ್ನು ಬಯಸುತ್ತೇವೆ ಎಂದು ಹುತಾತ್ಮ ಯೋಧನ ಪರಿವಾರ ಹೇಳಿತ್ತು. ಅವರ ಈ ಬೇಡಿಕೆಯನ್ನು ಈಡೇರಿಸಲಾಗಿದೆಯೇ? ಪ್ರತೀಕಾರ ಕೈಗೊಳ್ಳಲಾಗಿದೆಯೇ? ಹೌದೆನ್ನುತ್ತದೆ ರಾಷ್ಟ್ರೀಯ ಪತ್ರಿಕೆಯೊಂದರಲ್ಲಿ ಬಂದ ವರದಿ.
ಹುತಾತ್ಮ ಸೈನಿಕನ ಹತ್ಯೆಗೆ ಪ್ರತೀಕಾರವಾಗಿ ಭಾರತೀಯ ಸೇನೆ ಅಕ್ಟೋಬರ್ 29 ರಂದು ಪಾಕಿಸ್ತಾನದ ನಾಲ್ಕು ಸೇನಾನೆಲೆಗಳನ್ನು ನಾಶಗೊಳಿಸಿ ಕನಿಷ್ಠ 40 ವೈರಿ ಸೈನಿಕರನ್ನು ಹೊಡೆದುರುಳಿಸಿದೆ. 
 
ಅಕ್ಟೋಬರ್ 28 ರಂದು ಯೋಧ ಮನ್‌ದೀಪ್‌ ಸಿಂಗ್‌ ರನ್ನು ಹತ್ಯೆ ಮಾಡಿ ಆತನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದ ಪಾಕಿಸ್ತಾನಕ್ಕೆ ಮರು ದಿನವೇ ಭಾರತೀಯ ಸೇನೆ ಕಾರ್ಯಾಚರಣೆ 4 ಸೇನಾ ನೆಲೆಗಳನ್ನು ಧ್ವಂಸಗೊಳಿಸುವ ಮೂಲಕ ತಕ್ಕ ಪಾಠ ಕಲಿಸಿದೆ.
 
ಅಕ್ಟೋಬರ್ 28 ರಂದು ಸೇನೆಯ ಸಹಾಯದಿಂದ ಉಗ್ರರು ಭಾರತೀಯ ಯೋಧ ಮನ್ದೀಪ್ ಸಿಂಗ್ ಅವರನ್ನು ಹತ್ಯೆ ಮಾಡಿ ದೇಹವನ್ನು ತುಂಡು ತುಂಡಾಗಿಸಿದ್ದರು. ಕುಪ್ವಾರಾ ಜಿಲ್ಲೆಯ ಮಚ್ಚಿ ಸೆಕ್ಟರ್‌ನಲ್ಲಿ ನಡೆಸಿದ್ದ ಈ ಪೈಶಾಚಿಕ ಕೃತ್ಯ ಸಂಪೂರ್ಣ ದೇಶವನ್ನು ಬೆಚ್ಚಿ ಬೀಳಿಸಿತ್ತು. ಸಿಂಗ್ ಹತ್ಯೆಗೆ ಬದಲಾಗಿ 10 ಪಾಕ್ ಸೈನಿಕರ ಹತ್ಯೆಗೈಯ್ದು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಅವರ ಪರಿವಾರ ಆಗ್ರಹಿಸಿತ್ತು. ಅಂತೆಯೇ ಭಾರತೀಯ ಸೇನೆ ಸದ್ದಿಲ್ಲದೇ ಪ್ರತೀಕಾರವನ್ನು ತೆಗೆದುಕೊಂಡಿದೆ 10 ಲ್ಲ 40 ತಲೆಗಳನ್ನು ಚೆಂಡಾಡಿದೆ ಎಂದು ವರದಿಯಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ