ಪೋಷಕರ ಮೇಲಿನ ಸೇಡಿಗೆ ಅವರ 11 ವರ್ಷದ ಮಗನ ಬಲಿ ಪಡೆದ ಪಕ್ಕದಮನೆಯಾತ

ಮಂಗಳವಾರ, 28 ಮೇ 2019 (08:44 IST)
ನವದೆಹಲಿ : ತಂದೆ ತಾಯಿ ಬೈದಿದ್ದಕ್ಕೆ ಅವರ 11 ವರ್ಷದ ಮಗನನ್ನು ಕತ್ತು ಹಿಸುಕಿ ಕೊಂದ ಅಮಾನವೀಯ ಘಟನೆ ದೆಹಲಿಯಲ್ಲಿ ನಡೆದಿದೆ.



ಈಶಾನ್ಯ ದೆಹಲಿಯ ನೆಹರೂ ವಿಹಾರ್ ನಿವಾಸಿ ಡ್ಯಾನಿಷ್(28) ಕೊಲೆ ಮಾಡಿದ ಆರೋಪಿಯಾಗಿದ್ದು, ಈತ ಹಾಗೂ ಬಾಲಕ ಅಕ್ಕಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದರಿಂದ ಒಡನಾಟ ಚೆನ್ನಾಗಿಯೇ ಇತ್ತು. ಆದರೆ ಒಮ್ಮೆ ಬಾಲಕನ ತಂದೆತಾಯಿ ಡ್ಯಾನಿಷ್ ಗೆ ಬೈದಿದ್ದರು.ಇದರಿಂದ ಕೋಪಗೊಂಡಿದ್ದ ಡ್ಯಾನಿಷ್ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಬಾಲಕನನ್ನು ತನ್ನೊಡನೆ ಕರೆದೊಯ್ದು, ಖಜುರಿ ಖಾಸ್ ಫ್ಲೈಓವರ್ ಬಳಿ ಇರುವ ನಿರ್ಜನ ಪ್ರದೇಶದಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಹಾಗೆಯೇ ಶವವನ್ನು ಅಲ್ಲಿಯೆ ಹೂತಿದ್ದಾನೆ.

 

ಬಾಲಕ ಕಾಣಿಯಾದ ಹಿನ್ನಲೆಯಲ್ಲಿ ಆತನ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿರುವಾಗ ಬಾಲಕನ ಶವ ಪತ್ತೆಯಾಗಿದೆ. ನಂತರ ಪೊಲೀಸರು ಅಂಗಡಿಯೊಂದರ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಡ್ಯಾನಿಷ್ ಜೊತೆ ಬಾಲಕ ಹೋಗುತ್ತಿದ್ದ ದೃಶ್ಯ ಸೆರೆಯಾಗಿತ್ತು. ಬಳಿಕ ಡ್ಯಾನಿಷ್‍ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಆತ ಸತ್ಯಾಂಶವನ್ನು ಬಾಯ್ಬಿಟ್ಟಿದ್ದಾನೆ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ