ಆಘಾತಕಾರಿ! ನಾಯಿಮರಿಯ ಮೇಲೆ ಅತ್ಯಾಚಾರವೆಸಗಿ ಕೊಂದ ಚಾಲಕ

ಗುರುವಾರ, 31 ಆಗಸ್ಟ್ 2017 (20:04 IST)
ವಿಲಕ್ಷಣ ಪ್ರಕರಣವೊಂದರಲ್ಲಿ, ಟ್ಯಾಕ್ಸಿ ಚಾಲಕನೊಬ್ಬ ನಾಯಿಮರಿ ಸಾಯಿುವವರೆಗೂ ಅತ್ಯಾಚಾರವೆಸಗಿದ ಘಟನೆ ರೇಪ್ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. 
ನಾರೈನಾ ಪ್ರದೇಶದ ನಿವಾಸಿಯಾದ ನರೇಶ್ ಕುಮಾರ್, ತಾನು ನಾಯಿಮರಿಯ ಮೇಲೆ ಅತ್ಯಾಚಾರವೆಸಗಿ ಕೊಂದ ಬಗ್ಗೆ ಹೆಮ್ಮೆಪಡುತ್ತಿದ್ದನು ಎನ್ನಲಾಗಿದೆ.
 
ನಾಯಿಮರಿಯ ಗುಪ್ತಾಂಗದಲ್ಲಿ "ಮಿತಿಮೀರಿದ ರಕ್ತಸ್ರಾವ ಮತ್ತು ಆಘಾತದಿಂದ ಸಾವನ್ನಪ್ಪಿದೆ ಎಂದು ಪೋಸ್ಟ್‌ಮಾರ್ಟಂ ವರದಿಯಲ್ಲಿ ಬಹಿರಂಗವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 
 
.ಕಳೆದ ಆಗಸ್ಟ್ 25 ರಂದು 34 ವರ್ಷ ವಯಸ್ಸಿನ ಆರೋಪಿ ಮದ್ಯಸೇವಿಸಿದ ಮತ್ತಿನಲ್ಲಿರುವಾಗ ಇಂತಹ ಹೀನ ಕೃತ್ಯ ಎಸಗಿದ್ದಾನೆ 
 
ನೆರೆಮನೆಯ ನಾಯಿಮರಿಯ ಮೇಲೆ ಅತ್ಯಾಚಾರವೆಸಗಿ ರಕ್ತ ಬರುತ್ತಿರುವುದನ್ನು ಕಂಡು ಬಿಟ್ಟು ನಂತರ ಹತ್ಯೆ ಮಾಡಿದ್ದಾಗಿ ಆರೋಪಿ ನರೇಶ್ ತಪ್ಪೊಪ್ಪಿಕೊಂಡಿದ್ದಾನೆ,
 
ಮೃತ ನಾಯಿಮರಿಯ ಮೃತ ದೇಹವನ್ನು ನಾರೈನ ಕೈಗಾರಿಕಾ ಪ್ರದೇಶದ ಬಳಿ ಹೂತುಹಾಕಲು ಸಹೋದರನ ಸಹಾಯ ಪಡೆದಿದ್ದನು. ಆರೋಪಿ ನರೇಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ