ರಾಜಕೀಯಕ್ಕೆ ಬರುವ ಮೊದಲೇ ರಜನೀಕಾಂತ್ ಮೇಲೆ ಹಣ ಅವ್ಯವಹಾರ ಆರೋಪ!

ಶನಿವಾರ, 24 ಜೂನ್ 2017 (12:23 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಇನ್ನೂ ರಾಜಕೀಯಕ್ಕೆ ಕಾಲಿಡುತ್ತಿರುವ ಬಗ್ಗೆ ಘೋಷಣೆ ಮಾಡಿಲ್ಲ. ಅದಕ್ಕೂ ಮೊದಲೇ ಅವರ ವಿರುದ್ಧ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವ್ಯವಹಾರದ ಆರೋಪ ಮಾಡಿದ್ದಾರೆ.

 
‘ರಜನಿ ನೀವು ಭಾರೀ ಹಣ ಅವ್ಯವಹಾರ ಮಾಡಿದ್ದೀರಿ. ಹಾಗಾಗಿ ರಾಜಕೀಯಕ್ಕೆ ಬಂದರೆ ಸಮಸ್ಯೆಯಾಗಬಹುದು. ಒಂದು ವೇಳೆ ಬಂದರೂ ನೀವು ರಾಜಕಾರಣಕ್ಕೆ ಲಾಯಕ್ಕಾದ ವ್ಯಕ್ತಿಯಲ್ಲ’ ಎಂದು ಸುಬ್ರಮಣಿಯನ್ ಸ್ವಾಮಿ ಎಚ್ಚರಿಸಿದ್ದಾರೆ.

ಸೆಪ್ಟೆಂಬರ್ ನಲ್ಲಿ ಅಭಿಮಾನಿಗಳೊಂದಿಗೆ ಸಭೆ ನಡೆಸಿದ ಬಳಿಕ ರಾಜಕೀಯ ಪ್ರವೇಶ ಬಗ್ಗೆ ಘೋಷಣೆ ಮಾಡುವುದಾಗಿ ರಜನಿ ಮೊನ್ನೆಯಷ್ಟೇ ಹೇಳಿದ್ದರು. ಅವರು ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳೂ ಇವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ