ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿದ ನಂತರ ಸುಬ್ರಹ್ಮಣ್ಯಂ ಸ್ವಾಮಿ, ನನಗೆ ಸಂತಸವಾಗಿಲ್ಲ ಎಂದಾಗ ಕೋರ್ಟ್, ಹಾಗಾದ್ರೆ ಸಂತಸಪಡಬೇಡಿ ಎಂದು ಎಂದುತ್ತರಿಸಿದೆ.
ಕಳೆದ ಮಾರ್ಚ್ 21 ರಂದು ಸುಪ್ರೀಂಕೋರ್ಟ್, ರಾಮಜನ್ಮಭೂಮಿ- ಬಾಬ್ರಿಮಸೀದಿ ವಿವಾದವನ್ನು ಎಲ್ಲಾ ರಾಜಕೀಯ ಪಕ್ಷಗಳು ಪರಸ್ಪರ ಚರ್ಚಿಸಿ ಸಂಧಾನದ ಮೂಲಕ ಇತ್ಯರ್ಥಗೊಳಿಸುವುದು ಸೂಕ್ತ. ಅಗತ್ಯವಾದಲ್ಲಿ ಉಭಯ ಸಮುದಾಯಗಳ ಮಧ್ಯೆ ಮಧ್ಯಸ್ಥಿಕೆ ವಹಿಸಲು ನ್ಯಾಯಮೂರ್ತಿಯನ್ನು ನೀಡಲು ಸಿದ್ದ ಎಂದು ಸಲಹೆ ನೀಡಿತ್ತು.
ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದವನ್ನು ಸಂಧಾನದ ಮೂಲಕ ಇತ್ಯರ್ಥಗೊಳಿಸುವ ಹಲವಾರು ಪ್ರಯತ್ನಗಳು ಹಿಂದೆ ನಡೆದಿವೆ. ಆದರೆ, ಸಂಧಾನ ಫಲಪ್ರದವಾಗಿಲ್ಲ. ನ್ಯಾಯಾಲಯ ಮಧ್ಯಸ್ಥಿಕೆವಹಿಸಿ ವಿವಾದ ಇತ್ಯರ್ಥಗೊಳಿಸುವ ಸಮಯ ಬಂದಿದೆ ಎಂದು ಸ್ವಾಮಿ ಕೋರ್ಟ್ಗೆ ಮನವಿ ಮಾಡಿದರು.