ನಿರೀಕ್ಷಿಸಿರದ ಸುಪ್ರೀಂ ಕೋರ್ಟ್ ತೀರ್ಪು: ಹಾರ ತುರಾಯಿ ತಂದಿದ್ದ ಶಶಿಕಲಾ ಬೆಂಬಲಿಗರಿಗೆ ನಿರಾಸೆ!

ಮಂಗಳವಾರ, 14 ಫೆಬ್ರವರಿ 2017 (10:59 IST)
ಚೆನ್ನೈ: ಆದಾಯ ಮೀರಿ ಆಸ್ಥಿ ಪ್ರಕರಣದಲ್ಲಿ ದೋಷಿ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡುತ್ತಿದ್ದರೆ, ಶಶಿಕಲಾ ನಟರಾಜನ್ ತಮ್ಮ ಬೆಂಬಲಿಗ ಶಾಸಕರೊಂದಿಗೆ ಗೋಲ್ಡನ್ ಬೇ ರೆಸಾರ್ಟ್ ನಲ್ಲಿದ್ದಾರೆ.

 
ಇದರಿಂದಾಗಿ ರೆಸಾರ್ಟ್ ಸುತ್ತ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಅತ್ತ ಇನ್ನೇನು ಶಶಿಕಲಾ ಸಿಎಂ ಆಗಿಯೇ ಬಿಟ್ಟರು ಎಂಬ ಖುಷಿಯಲ್ಲಿದ್ದ ಬೆಂಬಲಿಗರಿಗೆ ನಿರಾಸೆಯಾಗಿದೆ. ಹಾರ ತುರಾಯಿ, ಸಿಹಿ ಹಂಚಿ ಸಂಭ್ರಮಿಸಲು ಪೂರ್ಣ ಸಿದ್ಧವಾಗಿದ್ದ ಬೆಂಬಲಿಗರು ಶೋಕದಲ್ಲಿ ಮುಳುಗಿದ್ದಾರೆ.

ವಿಶೇಷವೆಂದರೆ ಶಶಿಕಲಾ ನಟರಾಜನ್ ವಿಜಯಾಚರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದರು. ಇವರಿಗೆಲ್ಲಾ ಈಗ ನಿರಾಸೆ ತಂದಿದೆ. ಅಂತೂ ಎಐಎಡಿಎಂಕೆ ಪಕ್ಷದ ಕಚೇರಿ ಎದುರು ಸೂತಕದ ಛಾಯೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ