ಹೊಸ ರಾಜಕೀಯ ಪಕ್ಷ ಘೋಷಿಸಿದ ತಲೈವಾ; ಭಾಷಣದಲ್ಲಿ ರಜಿನಿಕಾಂತ್ ಹೇಳಿದ್ದೇನು ಗೊತ್ತಾ…?

ಭಾನುವಾರ, 31 ಡಿಸೆಂಬರ್ 2017 (09:27 IST)
ಚೆನ್ನೈ: ನೂತನ ಪಕ್ಷವನ್ನು ರಚಿಸುವ ಕುರಿತು ರಜಿನಿಕಾಂತ್ ಚೆನ್ನೈನ ರಾಘವೇಂದ್ರ ಹಾಲ್ ನಲ್ಲಿ ಘೋಷಣೆ ಮಾಡಿದ್ದಾರೆ. ಅಂತೂ ರಜಿನಿಕಾಂತ್ ರಾಜಕೀಯಕ್ಕೆ ಎಂಟ್ರಿ ಕೊಡುವುದನ್ನು ಖಚಿತಪಡಿಸಿದರು. ಲೋಕಸಭಾ ಚುನಾವಣೆ ವೇಳೆ ಪಕ್ಷವನ್ನು ರಜಿನಿಕಾಂತ್ ಘೋಷಣೆ ಮಾಡಲಿದ್ದಾರೆ.


‘ರಾಜಕೀಯ ವ್ಯವಸ್ಥೆ ಸದ್ಯ ತುಂಬಾ ಕೆಟ್ಟು ಹೋಗಿದೆ. ಕಳೆದೊಂದು ವರ್ಷದಿಂದ ಚೆನ್ನೈನ ಜನ ರೋಸಿ ಹೋಗಿದ್ದಾರೆ. ತಮಿಳರಿಗಾಗಿ ನಾನು ನನ್ನ ಹೋರಾಟವನ್ನು ಮುಂದುವರಿಸುತ್ತೇನೆ. ನಾನು ನನ್ನ ಸ್ವಂತ ಪಕ್ಷವನ್ನು ಸ್ಥಾಪಿಸುತ್ತಿದ್ದೇನೆ. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಬೇಕಿದೆ. ನಿಮ್ಮೆಲ್ಲರ ಸಹಕಾರ ಸಿಕ್ಕೆ ಸಿಗುತ್ತದೆ ಎಂಬ ನಂಬಿಕೆ ನನಗಿದೆ. ನನ್ನ ಜನರೇ ನನ್ನ ಶಕ್ತಿ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಸಮಯವೀಗ ಬಂದಿದೆ. ಲೋಕಸಭಾ ಚುನಾವಣೆಯಲ್ಲೂ ನಾವು ಸ್ಪರ್ಧಿಸುತ್ತೇವೆ'. ಎಂದು ಸೂಪರ್ ಸ್ಟಾರ್ ರಜಿನಿಕಾಂತ್ ಚೆನ್ನೈನಲ್ಲಿ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ