ಸಿಎಂ ಯೋಗಿಗೆ ಜಿಂದಾಬಾದ್ ಎಂದಿದ್ದಕ್ಕೆ ಬಿತ್ತು ಹೆಣ..!

ಮಂಗಳವಾರ, 28 ಮಾರ್ಚ್ 2017 (11:57 IST)
ಲಕ್ನೊ: ಉತ್ತರ ಪ್ರದೇಶದಲ್ಲಿ ಈಗ ಸಿಎಂ ಯೋಗಿ ಆದಿತ್ಯನಾಥ್ ಹವಾ. ಆದರೆ ವಿರೋಧ ಪಕ್ಷಗಳಿಗೆ ಇದು ನುಂಗಲಾರದ ತುತ್ತು.  ‘ಯೋಗಿ ಜಿಂದಾಬಾದ್’ ಎನ್ನುವ ಘೋಷಣೆ ಕೂಗಿದ್ದಕ್ಕೆ ಸಮಾಜವಾದಿ ಪಕ್ಷದ ನಾಯನೊಬ್ಬ ಯುವಕನನ್ನು ಗುಂಡಿಕ್ಕಿ ಕೊಂದಿದ್ದಾನೆ.

 

ಅಸ್ಮೋಲಿ ಪೊಲೀಸ್ ಠಾಣಾ ವ್ಯಾಪ್ತಿಯ ಮದನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. 17 ವರ್ಷದ ವಿನಿಕೇತ್ ಆಲಿಯಾಸ್ ನಾನೆ ಮೃತಪಟ್ಟ ದುರ್ದೈವಿ. ಈತ ಬಿಜೆಪಿ ನಾಯಕ ಮೋನು ಸಿಂಗ್ ಸಂಬಂಧಿ ಎನ್ನಲಾಗಿದೆ.

ಆತನ ನೆರೆ ಮನೆಯ ನಿವಾಸಿ ಸಮಾಜವಾದಿ ಪಕ್ಷದ ನಾಯಕ ಶಿಶುಪಾಲ್ ಸಿಂಗ್ ಗುಂಡಿಕ್ಕಿದಾತ. ಘಟನೆ ನಡೆದ ಮೇಲೆ ರೊಚ್ಚಿಗೆದ್ದ ಸಾರ್ವಜನಿಕರು ಶಿಶುಪಾಲ್ ಮನೆ ಮೇಲೆ ಕಲ್ಲುತೂರಾಟ ನಡೆಸಿ ದಾಂಧಲೆ ನಡೆಸಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ