ಗಡಿಯಲ್ಲಿ ಮತ್ತೆ ಉಗ್ರರ ದಾಳಿ

ಗುರುವಾರ, 8 ಡಿಸೆಂಬರ್ 2016 (09:11 IST)
ಜಮ್ಮು ಮತ್ತು ಕಾಶ್ಮೀರದ ಅನಂತ ನಾಗ್ ಜಿಲ್ಲೆಯ ಆರ್ವಾನಿಯಲ್ಲಿ ಭಯೋತ್ಪಾದಕರಿಂದ ಗುಂಡಿನ ದಾಳಿ ನಡೆದಿದ್ದು ಅವರನ್ನು ಹೊಡೆದುರುಳಿಸಲು ಭಾರತೀಯ ಸೇನೆ ಕಾರ್ಯಾಚರಣೆಯನ್ನು ಕೈಗೊಂಡಿದೆ.

ನಿನ್ನೆ ಸಂಜೆಯಿಂದ ಇಬ್ಬರು ಉಗ್ರರು ಭಾರತೀಯ ಸೇನೆಯನ್ನು ಗುರಿಯಾಗಿಸಿಕೊಂಡು ದಾಳಿಯನ್ನು ನಡೆಸುತ್ತಿದ್ದಾರೆ. 
 
ಉಗ್ರರು ಅಡಗಿರುವ ತಾಣವನ್ನು ಸುತ್ತುವರೆದಿರುವ ಸೈನಿಕರು ಅವರನ್ನು ಹೊಡೆದುರುಳಿಸಲು ಪ್ರತಿದಾಳಿ ನಡೆಸುತ್ತಿದ್ದಾರೆ. 
 
ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಭಾರತೀಯ ಸೇನೆ ಸೇಮಿತ ದಾಳಿ ನಡೆಸಿದ ಬಳಿಕ ಗಡಿಯಲ್ಲಿ ಉಗ್ರರ ಉಪಟಳ ಹೆಚ್ಚಾಗಿದ್ದು   ನವೆಂಬರ್ 29 ರಂದು ನಗ್ರೋಟಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ  ಬೆಂಗಳೂರು ಮೂಲದ ಮೇಜರ್ ಗಿರೀಶ್ ಕುಮಾರ್ ಸೇರಿ 7 ಮಂದಿ ಸೈನಿಕರು ಹುತಾತ್ಮರಾಗಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ