ಬಿಜೆಪಿ ತೊರೆಯಲ್ಲ, ಬೇಕಿದ್ದರೆ ಉಚ್ಚಾಟಿಸಲಿ

ಗುರುವಾರ, 1 ಫೆಬ್ರವರಿ 2018 (09:23 IST)

ಬಿಜೆಪಿ ಪಕ್ಷ ಬಿಡುವುದಿಲ್ಲ, ಬೇಕಿದ್ದರೆ ಅವರೇ ನನ್ನನ್ನು ಉಚ್ಚಾಟನೆ ಮಾಡಲಿ ಎಂದು ಬಿಜೆಪಿ ಹಿರಿಯ ನಾಯಕ ಯಶವಂತ ಸಿನ್ಹಾ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದವ ಅವರು, ಬಿಜೆಪಿ ಸದಸ್ಯನಾಗಿರುವುದಕ್ಕಿಂತ ಭಾರತದ ಪ್ರಜೆಯಾಗಿರುವುದು ಅತ್ಯಂತ ದೊಡ್ಡದು ಎಂದಿದ್ದಾರೆ.

ದೇಶದ ಪ್ರಜೆಯಾಗಿ ಸಮಸ್ಯೆಗಳನ್ನು ಗಮನಸಿದ್ದೇನೆ. ಯಾವುದೋ ಪಕ್ಷದ ನೀತಿಯಿಂದ ಅಥವಾ ವಿರೋಧ ಪಕ್ಷದ ವ್ಯಕ್ತಿಯಾಗಿ ಸಮಸ್ಯೆಗಳನ್ನು ಕೈಗೆತ್ತಿಕೊಂಡಿಲ್ಲ. ರಾಷ್ಟ್ರಮಂಚ್ ರೈತರ ಹಾಗೂ ನಿರುದ್ಯೋಗಿಗಳ ಚಳವಳಿಯ ವೇದಿಕೆಯಾಗಿದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಸಮಸ್ಯೆಗಳನ್ನು ಅರಿಯುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ