ನೊಬೆಲ್ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಮನೆಗೆ ನುಗ್ಗಿ ಪ್ರಶಸ್ತಿ ಕದ್ದ ಕಳ್ಳರು!

ಮಂಗಳವಾರ, 7 ಫೆಬ್ರವರಿ 2017 (11:09 IST)
ನವದೆಹಲಿ:  ಭಾರತದ ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಹೋರಾಟಗಾರ ಕೈಲಾಶ್ ಸತ್ಯಾರ್ಥಿ ಮನೆಯಲ್ಲಿ ಕಳ್ಳತನ ನಡೆದಿದೆ. ಬೀಗ ಒಡೆದು ಮನೆಗೆ ನುಗ್ಗಿದ ಕಳ್ಳರು ನೊಬೆಲ್ ಪ್ರಶಸ್ತಿ ಪ್ರತಿಯನ್ನು ಕದ್ದೊಯ್ದಿದ್ದಾರೆ.
 

ದೆಹಲಿಯ ಅರಾವಲಿ ಅಪಾರ್ಟ್ ಮೆಂಟ್ ನಲ್ಲಿರುವ ಕೈಲಾಶ್ ನಿವಾಸದಲ್ಲಿ ಘಟನೆ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದೆ. ಕೈಲಾಶ್ ವಿದೇಶ ಪ್ರವಾಸದಲ್ಲಿದ್ದಾರೆ.

ಮನೆಯ ಬೀಗ ಒಡೆದ ಕಳ್ಳರು ನೊಬೆಲ್ ಪ್ರಶಸ್ತಿಯ ಪ್ರತಿ, ಸೇರಿದಂತೆ ಚಿನ್ನಾಭರಣ, ಹಣ ಹೊತ್ತೊಯ್ದಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ