ಕೇಂದ್ರ ಸರ್ಕಾರ 500 ಮತ್ತು 1,000 ರೂಪಾಯಿ ನೋಟುಗಳನ್ನು ರದ್ದುಗೊಳಿಸಿದ ಬಳಿಕ ದೇಶಾದ್ಯಂತ ಎಲ್ಲ ಬ್ಯಾಂಕ್, ಅಂಚೆ ಕಚೇರಿ ಮತ್ತು ಎಟಿಎಂಗಳ ಮುಂದೆ ಜನಸಾಗರವೇ ಕಂಡುಬರುತ್ತಿದೆ. ಸರತಿ ಸಾಲಲ್ಲಿ ನಿಂತಿದ್ದ ಕೆಲವರು ಪ್ರಾಣವನ್ನೇ ಕಳೆದುಕೊಂಡಿರುವುದು ನಡೆದಿದೆ.
ಏತನ್ಮಧ್ಯೆ, ಕೇರಳದಲ್ಲಿ ಕೂಡ ಹಣ ವಿನಿಮಯಕ್ಕೆ ಬಂದಿದ್ದ ಇಬ್ಬರು ಸಾವನ್ನಪ್ಪಿದ ವರದಿಯಾಗಿದೆ. ಕೇರಳದ ತಲಚೇರಿ ಮತ್ತು ಆಳಪುರಿಯಲ್ಲಿ ಘಟನೆ ನಡೆದಿದೆ. ಆಳಪುರಿಯಲ್ಲಿ ಬ್ಯಾಂಕ್ ಒಂದರ ಮುಂದೆ ಮುಕ್ಕಾಲು ಗಂಟೆ ಸರತಿ ಸಾಲಲ್ಲಿ ನಿಂತಿದ್ದ ವೃದ್ಧರೊಬ್ಬರು ಕುಸಿದು ಬಿದ್ದು ಮೃತ ಪಟ್ಟಿದ್ದಾರೆ. ತಲಚೇರಿಯಲ್ಲಿ ಉನ್ನಿ(48) ಎಂಬುವವರು ಎರಡನೇ ಮಹಡಿಯಿಂದ ಕೆಳಕ್ಕೆ ಬಿದ್ದು ದುರ್ಮರಣವನ್ನಪ್ಪಿದ್ದಾರೆ.