ಕರ್ನಾಟಕದಿಂದ ರಾಜ್ಯಸಭಾ ಸಂಸದರಾಗಿದ್ದ ಅವರ ಸದಸ್ಯತ್ವ ಜೂನ್ 30 ರಂದು ಕೊನೆಗೊಳ್ಳಲಿತ್ತು. ಆದರೆ ರಾಜ್ಯಸಭೆ ನೀತಿ ಸಮಿತಿ ಅವರ ಉಚ್ಛಾಟನೆಗೆ ಶಿಫಾರಸ್ಸು ಮಾಡಿತ್ತು. ಸಂಸತ್ತಿನ ನೀತಿ ಸಮಿತಿಗೆ ತಾನು ಉತ್ತರ ನೀಡಬೇಕಾಗಿದ್ದ ಗಡುವಿಗೆ ಒಂದು ದಿನದ ಮೊದಲು ಮಲ್ಯ ರಾಜೀನಾಮೆ ನಿರ್ಧಾರವನ್ನು ಕೈಗೊಂಡಿದ್ದಾರೆ. ಈ ಕುರಿತು ನೀತಿ ಸಮಿತಿಗೆ ಅವರು ಮಾಹಿತಿ ನೀಡಿದ್ದಾರೆ.