ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ವಿಜಯ್ ಮಲ್ಯ

ಸೋಮವಾರ, 2 ಮೇ 2016 (19:15 IST)
ಒಂಬತ್ತು ಸಾವಿರ ಕೋಟಿ ರೂ.ಗಳ ಬ್ಯಾಂಕ್‌ ಸಾಲ ಮರಳಿಸದೆ ವಿದೇಶಕ್ಕೆ ಪಲಾಯನ ಮಾಡಿರುವ ಮದ್ಯ ದೊರೆ ವಿಜಯ್‌ ಮಲ್ಯ ಅವರು ತಮ್ಮ ರಾಜ್ಯಸಭಾ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ.

ಕರ್ನಾಟಕದಿಂದ ರಾಜ್ಯಸಭಾ ಸಂಸದರಾಗಿದ್ದ ಅವರ ಸದಸ್ಯತ್ವ ಜೂನ್ 30 ರಂದು ಕೊನೆಗೊಳ್ಳಲಿತ್ತು. ಆದರೆ ರಾಜ್ಯಸಭೆ ನೀತಿ ಸಮಿತಿ ಅವರ ಉಚ್ಛಾಟನೆಗೆ ಶಿಫಾರಸ್ಸು ಮಾಡಿತ್ತು. ಸಂಸತ್ತಿನ ನೀತಿ ಸಮಿತಿಗೆ ತಾನು ಉತ್ತರ ನೀಡಬೇಕಾಗಿದ್ದ ಗಡುವಿಗೆ ಒಂದು ದಿನದ ಮೊದಲು ಮಲ್ಯ ರಾಜೀನಾಮೆ ನಿರ್ಧಾರವನ್ನು ಕೈಗೊಂಡಿದ್ದಾರೆ. ಈ ಕುರಿತು ನೀತಿ ಸಮಿತಿಗೆ ಅವರು ಮಾಹಿತಿ ನೀಡಿದ್ದಾರೆ. 
 
ಮಲ್ಯ ಅವರ ಅವರ ಪಾಸ್‌ ಪೋರ್ಟ್‌ ರದ್ದಾಗಿದ್ದು  ಅವರನ್ನು ಭಾರತಕ್ಕೆ ಗಡೀಪಾರು ಮಾಡುವಂತೆ ಬ್ರಿಟನ್‌ ಸರಕಾರಕ್ಕೆ ಈಗಾಗಲೇ ಮನವಿ ಮಾಡಿಕೊಳ್ಳಲಾಗಿದೆ. 

ವೆಬ್ದುನಿಯಾವನ್ನು ಓದಿ