ಯುಪಿ ಸಿಎಂ ಯೋಗಿಯನ್ನು ಭೇಟಿಯಾಗಬೇಕೆ? ಹಾಗಾದ್ರೆ ಸ್ನಾನ ಮಾಡಿ, ಪರ್ಫ್ಯೂಮ್ ಹಾಕಿಕೊಂಡು ಬರ್ಬೇಕು..

ಶನಿವಾರ, 27 ಮೇ 2017 (16:03 IST)
ಲಖನೌ:ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಬೇಕೆಂದರೆ ಮೊದಲು ಸ್ನಾನಮಾಡಿ, ಸುಗಂಧದ್ರವ್ಯವನ್ನು ಹಾಕಿಕೊಂಡು ಬರುವಂತೆ ಕುಶಿನಗರ ನಿವಾಸಿಗಳಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.
 
ಕುಶಿನಗರ ನಿವಾಸಿಗಳ ಜೊತೆ ಸಿಎಂ ಯೋಗಿ ಆದಿತ್ಯನಾಥ್ ಅವರ ಭೇಟಿ ಏರ್ಪಾಡಗಿದ್ದು, ಈ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳಿಗೆ ಸೋಪು, ಶಾಂಪು, ಪರ್ಫ್ಯೂಮ್ ನೀಡಿರುವ ಜಿಲ್ಲಾಡಳಿತ ಸಿಎಂ ಭೇಟಿಗೆ ಬರುವ ಮುನ್ನ ಸ್ನಾನ ಮಾಡಿಕೊಂಡು ಬರುವಂತೆ ಸೂಚಿಸಿದೆ.
 
ಎನ್ಸೆಫಾಲಿಟಿಸ್ ರೋಗ ನಿರ್ಮೂಲನಕ್ಕಾಗಿ ಮುಸಾಹರ್ ಸಮುದಾಯದ ಮಕ್ಕಳಿಗೆ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಸಮುದಾಯದ 5 ಮಕ್ಕಳಿಗೆ ಲಸಿಕೆ ಹಾಕಲು ಸಿಎಂ ಆದಿತ್ಯನಾಥ್ ಭೇಟಿ ನೀಡಲಿದ್ದಾರೆ. ಈ ಹಿನ್ನಲೆಯಲ್ಲಿ ಗ್ರಾಮದ ಎಲ್ಲರಿಗೂ ಸೋಪು ಶಾಂಪು, ಸುಗಂಧ ದ್ರವ್ಯಗಳನ್ನು ನೀಡಿರುವ ಜಿಲ್ಲಾಡಳಿತ ಸ್ವಚ್ಛವಾಗಿ ಬರುವಂತೆ ಹೇಳಿದೆ. ಅಲ್ಲದೇ ಮನೆಗಳನ್ನು, ರಸ್ತೆಗಳನ್ನು ಸ್ವಚ್ಛವಾಗಿರಿಸಿಕೊಳ್ಳುವಂತೆ ಸೂಚಿಸಿದ್ದು, ರಸ್ತೆ ಹಾಗೂ ಶೌಚಾಲಯ ಸೌಲಭ್ಯ ಒದಗಿಸಲಾಗಿದೆ. ಅಲ್ಲದೇ ರಸ್ತೆಗಳನ್ನು ದೀಪಗಳಿಂದ ಬೆಳಗಲಾಗಿದೆ.
 

ವೆಬ್ದುನಿಯಾವನ್ನು ಓದಿ