ಜಡ್ಜ್ ವಿರುದ್ಧವೇ ಬಂಧನ ವಾರಂಟ್!

ಶುಕ್ರವಾರ, 10 ಮಾರ್ಚ್ 2017 (11:22 IST)
ನವದೆಹಲಿ: ಇಂತಹದ್ದೊಂದು ಪ್ರಕರಣ ಭಾರತದ ನ್ಯಾಯಾಂಗ ಇತಿಹಾಸದಲ್ಲೇ ಮೊದಲು. ಅಂತಹದ್ದೇನು ನಡೆಯಿತು ಎಂಬ ಕುತೂಹಲವಿದ್ದರೆ ಈ ಸುದ್ದಿ ಓದಿ.

 
ಕೋಲ್ಕೊತ್ತಾ ಹೈಕೋರ್ಟ್ ನ ಹಾಲಿ ನ್ಯಾಯಾಧೀಶರಿಗೇ  ಸುಪ್ರೀಂ ಕೋರ್ಟ್ ಬಂಧನ ವಾರಂಟ್ ಹೊರಡಿಸಿದೆ. ನ್ಯಾಯಾಧೀಶ ಕರ್ಣನ್ ಬಂಧನ ವಾರಂಟ್ ಪಡೆದವರು. ನ್ಯಾಯಾಂಗ ನಿಂದನೆ ಪ್ರಕರಣವೊಂದರಲ್ಲಿ ಇವರು ಇಂದು ಸುಪ್ರೀಂ ಕೋರ್ಟ್ ಮುಂದೆ ವಿಚಾರಣೆಗೆ ಹಾಜರಾಗಬೇಕಿತ್ತು.

ಆದರೆ ಹಾಜರಾಗದ ಹಿನ್ನಲೆಯಲ್ಲಿ ಅವರ ವಿರುದ್ಧ ಸುಪ್ರೀಂ ಕೋರ್ಟ್ ಬಂಧನ ವಾರಂಟ್ ಹೊರಡಿಸಿದೆ. ಹಾಲಿ ನ್ಯಾಯಾಧೀಶರೊಬ್ಬರ ವಿರುದ್ಧವೇ ಬಂಧನ ವಾರಂಟ್ ಹೊರಡಿಸಿರುವುದು ಭಾರತದ ಇತಿಹಾಸದಲ್ಲೇ ಇದೇ ಮೊದಲು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ