40 ದಿನಗಳಲ್ಲಿ ಏಕಾಂಗಿಯಾಗಿ ಬಾವಿ ತೋಡಿದ ಆಧುನಿಕ ಭಗೀರಥ

ಭಾನುವಾರ, 8 ಮೇ 2016 (16:00 IST)
ತನ್ನ ಹೆಂಡತಿಗೆ ನೀರು ನೀಡಲು ಗ್ರಾಮದ ಜನರು ನಿರಾಕರಿಸಿದ್ದರಿಂದ ಸವಾಲಾಗಿ ಸ್ವೀಕರಿಸಿದ ದಲಿತ ಕುಟುಂಬದ ಬಾಪುರಾವ್ ತಾಜ್ನೆ 40 ದಿನಗಳಲ್ಲಿ ಬಾವಿಯನ್ನು ತೋಡಿ ಆಧುನಿಕ ಭಗೀರಥ ಎನಿಸಿಕೊಂಡಿದ್ದಾನೆ. ಮಹಾರಾಷ್ಟ್ರ ವಾಸಿಮ್ ಜಿಲ್ಲೆಯಲ್ಲಿ ತನ್ನ ಪತ್ನಿಗೆ ಅನ್ಯಜಾತಿಯ ಜನರು ನೀರು ಕೊಡಲು ನಿರಾಕರಿಸುತ್ತಿರುವುದನ್ನು ನೋಡಿ ಬೇಸರಗೊಂಡ. ಪತ್ನಿ ನೀರಿಗಾಗಿ ಅಂಗಲಾಚುವುದನ್ನು ಕಂಡು ಮರುಗಿದ.

ಆದರೆ ಇದನ್ನು ಸವಾಲಾಗಿ ಸ್ವೀಕರಿಸಿ ತಾನೇ ಗುದ್ದಲಿ, ಹಾರೆ ಹಿಡಿದು ತನ್ನ ಜಮೀನಿನಲ್ಲೇ ಬಾವಿ ತೋಡಲು ಆರಂಭಿಸಿ ನಲವತ್ತು ದಿನಗಳಲ್ಲಿ ಬಾವಿಯಿಂದ ನೀರು ಚಿಮ್ಮಿದಾಗ ಪತಿ, ಪತ್ನಿಯ ಕಣ್ಣುಗಳಲ್ಲಿ ಆನಂದಬಾಷ್ಪ ಸುರಿಯಿತು. ಈಗ ಇಡೀ ದಲಿತ ಕೇರಿ ಆ ಬಾವಿಯಿಂದ ನೀರು ಸೇದುತ್ತಿದ್ದು, ಬೇರೆ ಸಮುದಾಯದ ಜನರ ಮೇಲೆ ಅವಲಂಬಿತರಾಗಬೇಕಿಲ್ಲ. ತಾಜ್ನೆ ಬಡ ಕೂಲಿ ಕಾರ್ಮಿಕನಾಗಿದ್ದು ಈ ಮುಂಚೆ ಬಾವಿ ತೋಡಿರಲಿಲ್ಲ.

40 ದಿನಗಳ ಕಾಲ ದಿನವೂ 6 ಗಂಟೆಗಳ ಕಾಲ ಬಾವಿ ತೋಡಲು ಮೀಸಲಿಟ್ಟ. ಅವನಿಗೆ ಯಾರೂ ನೆರವು ನೀಡರಲಿಲ್ಲ. ಬದಲಾಗಿ ಅವನಿಗೆ ಹುಚ್ಚು ಹಿಡಿದಿದೆಯೆಂದು ಭಾವಿಸಿದ್ದರು.   ಕಲ್ಲು, ಗುಡ್ಡಗಳ ಪ್ರದೇಶದಲ್ಲಿ ಮೂರು ಬಾವಿಗಳು ಮತ್ತು ಬೋರ್ ವೆಲ್ ಒಣಗಿಹೋಗಿದ್ದು, ಗ್ರಾಮಸ್ಥರು ಅವನನ್ನು ಹಾಸ್ಯಮಾಡಿದ್ದರು. 
 
 

ವೆಬ್ದುನಿಯಾವನ್ನು ಓದಿ