ಮೋದಿಗೆ ಪಾಕ್ ವಿರುದ್ಧ ಹೆಚ್ಚು ದ್ವೇಷವೋ ಆಪ್ ವಿರುದ್ಧವೋ?

ಮಂಗಳವಾರ, 5 ಜುಲೈ 2016 (18:45 IST)
ದೆಹಲಿ ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರ ಬಂಧನವನ್ನು ರಾಜಕೀಯ ಹಗೆತನ ಎಂದಿರುವ ಆಮ್ ಆದ್ಮಿ ಪಕ್ಷ ಪ್ರಧಾನಿ ಮೋದಿ ಪಾಕಿಸ್ತಾನವನ್ನು ಹೆಚ್ಚು ದ್ವೇಷಿಸುತ್ತಾರೋ ಅಥವಾ ಆಪ್‌ನ್ನೋ ಎಂದು ಪ್ರಶ್ನಿಸಿದೆ. 
 
ದಾಖಲೆಗಳಿಲ್ಲದೆ ಕುಮಾರ್ ಅವರನ್ನು ಬೇಗೆ ಬಂಧಿಸಿದಿರಿ ಎಂದು ಸಿಬಿಐ ಕೋರ್ಟ್ ತನಿಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು. ಆದರೆ ಮತ್ತೆ ಅವರನ್ನು ಬಂಧಿಸಲಾಗಿದೆ ಎಂದು ಆಪ್ ಕಿಡಿಕಾರಿದೆ.
 
ಕಳೆದ 7 ದಿನಗಳಲ್ಲಾದ ಘಟನೆಗಳಲ್ಲಾದ ಘಟನೆಗಳನ್ನು ಉಲ್ಲೇಖಿಸಿದ, ಆಪ್ ಶಾಸಕ ದಿನೇಶ್ ಮೋಹನಿಯಾ ಅವರನ್ನು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಕ್ಕಿಸಲಾಗಿದೆ. ಮತ್ತೊಬ್ಬ ಶಾಸಕ ನರೇಶ್ ಯಾದವ್ ಅವರ ಮೇಲೆ ಕುರಾನ್‌ನ್ನು ಅಪವಿತ್ರಗೊಳಿಸಿದ ಆರೋಪ ಹೊರಿಸಲಾಗಿದೆ. ಕುಮಾರ್ ಅವರನ್ನು ಮತ್ತೆ ಬಂಧಿಸಲಾಗಿದೆ. ಇವೆಲ್ಲ ಮೋದಿ ಅವರು ಕೇಜ್ರಿವಾಲ್ ಮತ್ತು ಆಪ್ ಬಗ್ಗೆ ಭಯಗೊಂಡಿದ್ದಾರೆ ಎಂಬುದನ್ನು ಸ್ಪಷ್ಟ ಪಡಿಸುತ್ತವೆ ಎಂದು ಆಪ್ ಹಿರಿಯ ನಾಯಕ ಕಿಚಾಯಿಸಿದ್ದಾರೆ. 
 
2006ರಲ್ಲಿ ಬೇನಾಮಿ ಹೆಸರಿನಲ್ಲಿ ಕಂಪನಿ ಸ್ಥಾಪಿಸಿ ಟೆಂಡರ್ ದುರುಪಯೋಗಪಡಿಸಿಕೊಂಡ ಕುರಿತು ರಾಜೇಂದ್ರ ವಿರುದ್ಧ ಪ್ರಕರಣ ದಾಖಲಾಗಿತ್ತು. ರಾಜೇಂದ್ರ ಜತೆಗೆ ಇತರ ನಾಲ್ವರು ಆರೋಪಿಗಳನ್ನು ಸಿಬಿಐ ಸೋಮವಾರ ಬಂಧಿಸಿದೆ.


ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 
1984ರ ಸಾಲಿನ ಐಎಎಸ್ ಅಧಿಕಾರಿಯಾಗಿರುವ ರಾಜೇಂದ್ರ ದೆಹಲಿ ಸಿಎಂ ಕೇಜ್ರಿವಾಲ್​ರ ಐಐಟಿ ಸಹಪಾಠಿ ಮತ್ತು ಆಪ್ತರು. ಅವರನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿಯನ್ನಾಗಿ ಕೇಜ್ರಿವಾಲ್ ನೇಮಿಸಿಕೊಂಡಿದ್ದಾರೆ.

 

ವೆಬ್ದುನಿಯಾವನ್ನು ಓದಿ