ಜೊತೆ ಜೊತೆಯಲಿ ಕೊನೇ ದಿನ ತಂಡದೊಂದಿಗೆ ಅನಿರುದ್ಧ್ ಜತ್ಕಾರ್!

ಶನಿವಾರ, 20 ಮೇ 2023 (14:08 IST)
Photo Courtesy: facebook
ಬೆಂಗಳೂರು: ಜೊತೆ ಜೊತೆಯಲಿ ಧಾರವಾಹಿ ಕೊನೆಯ ಎಪಿಸೋಡ್ ನಿನ್ನೆ ರಾತ್ರಿ ಪ್ರಸಾರವಾಗಿದ್ದು, ಧಾರವಾಹಿ ಮುಕ್ತಾಯಗೊಂಡಿದೆ.

ಇದರ ಬೆನ್ನಲ್ಲೇ ಕಲಾವಿದರು, ನಿರ್ದೇಶಕ ಆರೂರು ಜಗದೀಶ್ ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಕಲಾವಿದರು ಕೊನೆಯ ದಿನದ ಚಿತ್ರೀಕರಣದ ಫೋಟೋಗಳನ್ನು ಹಂಚಿಕೊಂಡು ಭಾವುಕರಾಗಿದ್ದಾರೆ.

ವಿಶೇಷವೆಂದರೆ ಧಾರವಾಹಿ ತಂಡದೊಂದಿಗೆ ನಟ ಅನಿರುದ್ಧ್ ಜತ್ಕಾರ್ ಮತ್ತು ಪತ್ನಿ ಕೀರ್ತಿ ವರ್ಧನ್ ಕೂಡಾ ಕಾಣಿಸಿಕೊಂಡಿದ್ದಾರೆ. ಜೊತೆ ಜೊತೆಯಲಿ ಧಾರವಾಹಿಯಲ್ಲಿ ಆರ್ಯವರ್ಧನ್ ಪಾತ್ರದ ಮೂಲಕ ಮಿಂಚಿದ್ದ ಅನಿರುದ್ಧ್ ಬಳಿಕ ವಿವಾದದಿಂದಾಗಿ ಧಾರವಾಹಿಯಿಂದ ಹೊರನಡೆದಿದ್ದರು. ಅವರ ಸ್ಥಾನಕ್ಕೆ ಹರೀಶ್ ರಾಜ್ ಬಂದಿದ್ದರು.

ಆದರೆ ಅನಿರುದ್ಧ್ ಹೊರನಡೆಯುತ್ತಿದ್ದಂತೇ ಧಾರವಾಹಿಯ ಟಿಆರ್ ಪಿ ಕಡಿಮೆಯಾಗಿತ್ತು. ಹಾಗಿದ್ದರೂ ಇಷ್ಟು ದಿನಗಳ ಕಾಲ ಧಾರವಾಹಿ ಮುಂದುವರಿಸಲಾಗಿತ್ತು. ಈ ಧಾರವಾಹಿಯಲ್ಲಿ ನಾಯಕಿ ಅನು ಸಿರಿಮನೆ ಪಾತ್ರದ ಮನೆಯ ಚಿತ್ರೀಕರಣ ನಡೆಸುತ್ತಿದ್ದ ಬಸವನಗುಡಿಯ ಶೂಟಿಂಗ್ ಮನೆ ಮಾಲಿಕರು ಧಾರವಾಹಿ ತಂಡಕ್ಕೆ ವಿಶೇಷ ಔತಣ ಕೂಟ ಏರ್ಪಡಿಸಿದ್ದರು. ಈ ಔತಣಕೂಟಕ್ಕೆ ಎಲ್ಲಾ ಕಲಾವಿದರ ಜೊತೆ ಅನಿರುದ್ಧ್ ಕೂಡಾ ಆಗಮಿಸಿದ್ದರು. ಕೊನೆಯ ದಿನದ ಫೋಟೋ ಸೆಷನ್ ನಲ್ಲಿ ಅನಿರುದ್ಧ್ ಅವರನ್ನು ನೋಡಿದ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ