ಜೊತೆ ಜೊತೆಯಲಿ ಧಾರವಾಹಿಯಲ್ಲಿ ಮತ್ತೆ ಬಿರುಕು: ಸೀರಿಯಲ್ ಶೀಘ್ರದಲ್ಲೇ ಮುಕ್ತಾಯ

ಗುರುವಾರ, 11 ಮೇ 2023 (15:40 IST)
Photo Courtesy: Twitter
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ ಧಾರವಾಹಿಯ ವಿವಾದಗಳು ಮುಗಿಯುವ ಲಕ್ಷಣ ಕಾಣುತ್ತಿಲ್ಲ.

ಕೆಲವು ಸಮಯದ ಮೊದಲು ಹೀರೋ ಅನಿರುದ್ಧ್ ಜತ್ಕಾರ್ ಜೊತೆಗಿನ ವೈಮನಸ್ಯದಿಂದಾಗಿ ಜೊತೆ ಜೊತೆಯಲಿ ಧಾರವಾಹಿ ಸುದ್ದಿಯಾಗಿತ್ತು. ಬಳಿಕ ಅನಿರುದ್ಧ್ ಧಾರವಾಹಿಯಿಂದ ಹೊರಬಂದರೂ ಹರೀಶ್ ರಾಜ್ ಅವರನ್ನು ಆರ್ಯವರ್ಧನ್ ಪಾತ್ರಕ್ಕೆ ಕರೆತರಲಾಯಿತು. ಆದರೆ ಅನಿರುದ್ಧ್ ಅವರಷ್ಟು ಹರೀಶ್ ರಾಜ್ ಆರ್ಯವರ್ಧನ್ ಆಗಿ ಮಿಂಚಲಿಲ್ಲ.

ಇದೀಗ ಮತ್ತೆ ಧಾರವಾಹಿ ತಂಡ ಮತ್ತು ಕಲಾವಿದರ ನಡುವೆ ವೈಮನಸ್ಯದ ಮಾತು ಕೇಳಿಬರುತ್ತಿದೆ. ಧಾರವಾಹಿಯ ಕಲಾವಿದರು ಡೇಟ್ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಧಾರವಾಹಿ ಮುಗಿಸಲು ನಿರ್ಮಾಪಕ ಆರೂರ್ ಜಗದೀಶ್ ಚಿಂತನೆ ನಡೆಸಿದ್ದಾರಂತೆ. ಈಗಾಗಲೇ ಜೀ ವಾಹಿನಿ ಎರಡು ಹೊಸ ಧಾರವಾಹಿಗಳನ್ನು ಆರಂಭಿಸಲು ಪ್ರೋಮೋ ಹರಿಯಬಿಟ್ಟಿದೆ. ಈಗ ಜೊತೆ ಜೊತೆಯಲಿ ಧಾರವಾಹಿ ಸ್ಥಗಿತಗೊಳಿಸಿ ಆ ಸ್ಲಾಟ್ ನಲ್ಲಿ ಹೊಸ ಧಾರವಾಹಿ ಆರಂಭವಾಗುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ