ಮುದ್ದಿನ ನಾಯಿ ಜತೆ ನಟಿ ಮೇಘಾ ಶೆಟ್ಟಿ ಅಲಿಯಾಸ್ ಅನು ಸಿರಿಮನೆ ರಕ್ಷಾ ಬಂಧನ

ಸೋಮವಾರ, 3 ಆಗಸ್ಟ್ 2020 (10:36 IST)
ಬೆಂಗಳೂರು: ಇಂದು ಸಹೋದರತ್ವದ ಬಾಂಧವ್ಯವನ್ನು ಸಾರುವ ‘ರಕ್ಷಾ ಬಂಧನ’ ಹಬ್ಬ. ರಾಖಿ ಹಬ್ಬವನ್ನು ಸಾಮಾನ್ಯವಾಗಿ ಹೆಣ್ಣು ಮಕ್ಕಳು ತಮ್ಮ ಸಹೋದರನ ಜತೆಗೆ ಆಚರಿಸುವುದು ಸಹಜ.


ಆದರೆ ಜೊತೆ ಜೊತೆಯಲಿ ಧಾರವಾಹಿ ಖ್ಯಾತಿಯ ಅನು ಸಿರಿಮನೆ ಅಲಿಯಾಸ್ ನಟಿ ಮೇಘಾ ಶೆಟ್ಟಿ ತಮ್ಮ ಸಹೋದರರ ಜತೆಗೆ ಮುದ್ದಿನ ನಾಯಿಗೂ ಪೂಜೆ ಮಾಡಿದ್ದಾರೆ.

ತಮ್ಮ ಫೇವರಿಟ್ ಪೆಟ್ ಗೂ ಸಹೋದರರ ಸಾಲಿನಲ್ಲಿ ಕೂರಿಸಿ ಆರತಿ ಎತ್ತಿ, ಹಣೆಗೆ ಕುಂಕುಮ ಇಟ್ಟು ರಾಖಿ ಕಟ್ಟಿ ನನ್ನ ಮುದ್ದು ಸಹೋದರ ಎಂದು ರಕ್ಷಾ ಬಂಧನವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ