ಬಿಬಿಕೆ10: ಸಂತು-ಪಂತು ಜೋಡಿಯನ್ನು ಉಳಿಸಿಕೊಂಡ ಕಿಚ್ಚ ಸುದೀಪ್

Krishnaveni K

ಸೋಮವಾರ, 15 ಜನವರಿ 2024 (08:00 IST)
ಬೆಂಗಳೂರು: ಈ ವಾರ ಬಿಗ್ ಬಾಸ್ ಮನೆಯಿಂದ ವರ್ತೂರು ಸಂತೋಷ್ ಹೊರಹೋಗಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಕಿಚ್ಚ ಸುದೀಪ್ ಟ್ವಿಸ್ಟ್ ಕೊಟ್ಟಿದ್ದಾರೆ.

ಗೆಳೆಯ ವರ್ತೂರು ಸಂತೋಷ್ ಮನೆಯಿಂದ ಹೊರಹೋಗುತ್ತಾರೆಂದಾಗ ತುಕಾಲಿ ಸಂತೋಷ್ ಕಣ್ಣೀರಿಟ್ಟಿದ್ದರು. ಆದರೆ ಕೊನೆಯಲ್ಲಿ ಟ್ವಿಸ್ಟ್ ಕೊಟ್ಟ ಸುದೀಪ್ ಈ ವಾರ ನೋ ಎಲಿಮಿನೇಷನ್ ಎಂದು ಖುಷಿಯ ಶಾಕ್ ನೀಡಿದ್ದಾರೆ.

ಒಬ್ಬ ಗೆಳೆಯನಿಗಾಗಿ ಇನ್ನೊಬ್ಬ ಕಣ್ಣೀರಿಟ್ಟಿದ್ದನ್ನು ನೋಡಿ ಭಾವುಕರಾದ ಸುದೀಪ್ ಈ ಬಿಗ್ ಬಾಸ್ ನಲ್ಲಿ ಇಷ್ಟು ಒಳ್ಳೆಯ ಗೆಳೆತನ ನೋಡಲು ಸಿಕ್ಕಿದ್ದು ಕಡಿಮೆ. ನಾನು ನೋಡಿದ ಅತ್ಯಂತ ಆಪ್ತ ಗೆಳೆತನ ನಿಮ್ಮದು ಎಂದು ತಾವೂ ಭಾವುಕರಾದರು.

ಬಳಿಕ ಎಲ್ಲರ ಎದೆ ಬಡಿತ ಹೆಚ್ಚಿಸಿ ಕೊನೆಯಲ್ಲಿ ಈ ವಾರ ಯಾರೂ ಮನೆಯಿಂದ ಹೊರಹೋಗುತ್ತಿಲ್ಲ ಎಂದು ಘೋಷಿಸಿದರು. ಅವರ ಈ ಘೋಷಣೆಗೆ ಸಂತು-ಪಂತು ಗೆಳೆಯರು ಮತ್ತು ಅವರನ್ನು ಫಾಲೋ ಮಾಡುತ್ತಿರುವ ಪ್ರೇಕ್ಷಕರಿಗೂ ಭಾರೀ ಖುಷಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ