ಬಿಗ್ ಬಾಸ್: ಮುನಿಸಿಕೊಂಡಿದ್ದ ರಿಯಾಜ್-ದಿವಾಕರ್ ನಡುವೆ ಡಾಲ್ ನಿವೇದಿತಾ ಸಂಧಾನ!

ಸೋಮವಾರ, 11 ಡಿಸೆಂಬರ್ 2017 (10:21 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಗಂಧದ ಗುಡಿ ಟಾಸ್ಕ್ ಮಾಡುವಾಗ ಕಿತ್ತಾಡಿಕೊಂಡಿದ್ದ ದಿವಾಕರ್ ಮತ್ತು ರಿಯಾಜ್ ನಡುವೆ ಸಂಧಾನ ನಡೆಸುವ ಕೆಲಸವನ್ನು ಡಾಲ್ ನಿವೇದಿತಾ ಮಾಡಿದರು.
 

ಟಾಸ್ಕ್ ಸಂದರ್ಭದಲ್ಲಿ ರಿಯಾಜ್ ನಾಟಕ ಮಾಡುತ್ತಾರೆ ಎಂದು ದಿವಾಕರ್ ಕೂಗಾಡಿದ್ದರು. ಟಾಸ್ಕ್ ಮುಗಿದ ಬಳಿಕ ದಿವಾಕರ್ ರಿಯಾಜ್ ಬಳಿ ಬಂದು ಮಾತನಾಡುವ ಪ್ರಯತ್ನ ನಡೆಸಿದರೂ ರಿಯಾಜ್ ತಣ್ಣಗಾಗಿರಲಿಲ್ಲ.

ಹೀಗಾಗಿ ರಿಯಾಜ್ ಮತ್ತು ದಿವಾಕರ್ ನಡುವೆ ಸಂಧಾನ ನಡೆಸಿದ ನಿವೇದಿತಾ ಟಾಸ್ಕ್ ನಲ್ಲಿ ಎಷ್ಟು ಬೇಕಾದ್ರೂ ಕಿತ್ತಾಡಿ. ಟಾಸ್ಕ್ ಮುಗಿದ ಮೇಲೆ ಕೋಪ ಮರೆತು ಮಾತಾಡಿ ಎಂದು ಇಬ್ಬರನ್ನೂ ತಬ್ಬಿಕೊಳ್ಳುವಂತೆ ಹೇಳಿ ಸಂಧಾನ ನಡೆಸಿದರು. ಆದರೆ ಇದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ