ಬಿಗ್ ಬಾಸ್ ಗೆ ಕಮ್ ಬ್ಯಾಕ್ ಮಾಡಿದ ದಿನವೇ ವರ್ತೂರು ಸಂತೋಷ್ ಗೆ ಶಾಕ್!

ಮಂಗಳವಾರ, 31 ಅಕ್ಟೋಬರ್ 2023 (11:00 IST)
ಬೆಂಗಳೂರು: ಹುಲಿ ಉಗುರು ಪ್ರಕರಣದಲ್ಲಿ ಬಂಧಿತರಾಗಿದ್ದ ವರ್ತೂರು ಸಂತೋಷ್ ಈಗ ಮತ್ತೆ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಹುಲಿ ಉಗುರಿನ ಪೆಂಡೆಂಟ್ ಇಟ್ಟುಕೊಂಡಿದ್ದ ಕಾರಣಕ್ಕೆ ಅರಣ್ಯಾಧಿಕಾರಿಗಳು ಬಿಗ್ ಬಾಸ್ ಮನೆಯಿಂದಲೇ ಅರೆಸ್ಟ್ ಮಾಡಿದ್ದರು. ಬಳಿಕ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಇದೀಗ ಕೋರ್ಟ್ ನಲ್ಲಿ ಜಾಮೀನು ಪಡೆದು ಹೊರಗೆ ಬಂದಿರುವ ವರ್ತೂರು ಮರಳಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.

ಆದರೆ ಮನೆಗೆ ಬಂದ ದಿನವೇ ಅವರನ್ನು ನಾಮಿನೇಟ್ ಮಾಡಬೇಕೆಂದು ಸಹಸ್ಪರ್ಧಿಗಳು ಒತ್ತಾಯಿಸಿದ್ದಾರೆ. ಸಂತೋಷ್ ಬಿಗ್ ಬಾಸ್ ಮನೆಯಿಂದ ಹೊರಹೋಗಿದ್ದೇಕೆ ಎಂದು ಸಹಸ್ಪರ್ಧಿಗಳು ಪ್ರಶ್ನಿಸುತ್ತಿದ್ದಾಗ ಬಿಗ್ ಬಾಸ್ ಸ್ಪರ್ಧಿಗಳ ಬಳಿ ಅವರನ್ನು ನಾಮಿನೇಟ್ ಮಾಡುವ ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸಲು ಸೂಚಿಸಿದ್ದಾರೆ.

ಅದರಂತೆ ಸಹ ಸ್ಪರ್ಧಿಗಳು ಮೊದಲ ಒಂದು ವಾರ ಮನೆಯಲ್ಲಿದ್ದ ಕಾರಣ, ಆ ಪರ್ಫಾರ್ಮೆನ್ಸ್ ಪರಿಗಣಿಸಿ ಅವರು ಏನೂ ಹೆಚ್ಚು ಸಾಧನೆ ಮಾಡಿಲ್ಲ. ಹೀಗಾಗಿ ನಾಮಿನೇಟ್ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ