ಬಿಗ್ ಬಾಸ್ ಮುಕ್ತಾಯವಾದ ಬೆನ್ನಲ್ಲೇ ಕಿಚ್ಚ ಸುದೀಪ್ ಹೇಳಿಕೆ

ಗುರುವಾರ, 13 ಮೇ 2021 (09:47 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಅಂತಿಮ ಎಪಿಸೋಡ್ ನಿನ್ನೆ ರಾತ್ರಿ ಪ್ರಸಾರವಾಗಿದೆ. ಶೋ ಅರ್ಧಕ್ಕೇ ಮುಕ್ತಾಯವಾದ ಬೆನ್ನಲ್ಲೇ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.


ಲಾಕ್ ಡೌನ್ ಕಾರಣದಿಂದ ಬಿಗ್ ಬಾಸ್ ಎಂಟನೇ ಆವೃತ್ತಿಯನ್ನು ಅನಿವಾರ್ಯವಾಗಿ ರದ್ದು ಮಾಡಬೇಕಾಗಿ ಬಂದಿದೆ. ಬಿಗ್ ಬಾಸ್ 8 ಅಪೂರ್ಣವಾಗಿತ್ತು. ಹಾಗಿದ್ದರೂ ತೆರೆ ಎಳೆಯುವುದು ಅನಿವಾರ್ಯವಾಗಿತ್ತು ಎಂದು ಸುದೀಪ್ ಹೇಳಿದ್ದಾರೆ.

‘ಎಲ್ಲಾ ಸ್ಪರ್ಧಿಗಳು, ತಂತ್ರಜ್ಞರು ಮತ್ತು  ಬಿಗ್ ಬಾಸ್ ತಂಡ ಸುರಕ್ಷಿತವಾಗಿ ಮನೆಗೆ ತಲುಪಿ ತಮ್ಮ ಕುಟುಂಬದ ಜತೆ ಸೇರಿದೆ ಎಂದುಕೊಳ್ಳುತ್ತೇನೆ. ಎಲ್ಲರಿಗೂ ಆರೋಗ್ಯ ಕರುಣಿಸಲಿ, ಭವಿಷ್ಯಕ್ಕೆ ಶುಭ ಹಾರೈಕೆಗಳು. ಎಲ್ಲರೂ ಸುರಕ್ಷಿತವಾಗಿರಿ’ ಎಂದು ಸುದೀಪ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ