ವೀಕೆಂಡ್ ವೇದಿಕೆಯಲ್ಲಿ ಸುಧಾ ಮೂರ್ತಿಯನ್ನು ಕಂಡು ಖುಷಿಯಾದ ಪ್ರೇಕ್ಷಕರು

ಗುರುವಾರ, 30 ಮೇ 2019 (09:55 IST)
ಬೆಂಗಳೂರು: ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಜೀ ಕನ್ನಡ ವಾಹಿನಿ ಕೊನೆಗೂ ಪ್ರೇಕ್ಷಕರ ಒತ್ತಾಸೆಯಂತೆ ಇನ್ ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾ ಮೂರ್ತಿಯವರನ್ನು ಕರೆತಂದಿದೆ.


ಶನಿವಾರದ ಎಪಿಸೋಡ್ ನಲ್ಲಿ ನಾರಾಯಣ ಮೂರ್ತಿಯವರ ಬದುಕಿನ ಚಿತ್ರಣ ತೆರೆದಿಡಲಿರುವ ರಮೇಶ್ ಅರವಿಂದ್ ಭಾನುವಾರ ಅವರ ಪತ್ನಿ, ಸಮಾಜ ಸೇವಕಿ ಸುಧಾ ಮೂರ್ತಿಯವರ ಜೀವನದ ಸಾಧನೆಗಳನ್ನು ಅನಾವರಣಗೊಳಿಸಲಿದ್ದಾರೆ.

ಅಂದ ಹಾಗೆ ಸುಧಾ ಮೂರ್ತಿಯವರನ್ನು ಸಾಧಕರ ಸೀಟ್ ಗೆ ಕರೆತರಬೇಕು ಎಂದು ಎಷ್ಟೋ ದಿನದಿಂದ ಪ್ರೇಕ್ಷಕರು ಒತ್ತಾಯಿಸುತ್ತಲೇ ಇದ್ದಾರೆ. ಅದರಂತೆ ಈ ಭಾನುವಾರ ಅವರ ಎಪಿಸೋಡ್ ಪ್ರಸಾರವಾಗುತ್ತಿರುವ ಸುದ್ದಿ ತಿಳಿದು ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ಈ ಎಪಿಸೋಡ್ ನೋಡಲು ಕಾಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ