ನನ್ನ, ಪರಮೇಶ್ವರ್ ನಡುವಿನ ಸಂಬಂಧ ಉತ್ತಮವಾಗಿದೆ: ಸಿಎಂ ಎಚ್ ಡಿಕೆ

ಬುಧವಾರ, 30 ಮೇ 2018 (13:30 IST)
ಬೆಂಗಳೂರು: ನನ್ನ ಮತ್ತು  ಜಿ ಪರಮೇಶ್ವರ್ ನಡುವಿನ ಸಂಬಂಧ ಉತ್ತಮವಾಗಿದೆ. ಅಷ್ಟು ಬೇಗ ಯಾರೂ ನಮ್ಮ ಸರ್ಕಾರವನ್ನು ಉರುಳಿಸಲಾಗದು ಎಂದು ಸಿಎಂ ಎಚ್ ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ರೈತ ನಾಯಕರೊಂದಿಗಿನ ಸಭೆಯಲ್ಲಿ ಮಾತನಾಡಿದ ಸಿಎಂ, ನಮ್ಮ ನಿಲುವಿಗೆ ಕಾಂಗ್ರೆಸ್ ನಾಯಕರೂ ಬೆಂಬಲ ಕೊಡುತ್ತಾರೆ. ನನ್ನ, ಪರಮೇಶ್ವರ್ ಸಂಬಂಧ ಚೆನ್ನಾಗಿದೆ. ಇಂತಹ ಸುವರ್ಣಾವಕಾಶ ಕಳೆದುಕೊಳ್ಳಬೇಡಿ. ಉತ್ತಮ ಸಲಹೆ ಕೊಡಿ ಎಂದು ಮನವಿ ಮಾಡಿದ್ದಾರೆ.

ಸರ್ಕಾರದ ಬಗ್ಗೆ ಕೆಲವರು ಇಲ್ಲ ಸಲ್ಲದ ಅಪಸ್ವರ ಎಬ್ಬಿಸುತ್ತಿದ್ದಾರೆ. ಆದರೆ ನಮ್ಮ ಸರ್ಕಾರ ಅಷ್ಟು ಬೇಗ ಉರುಳದು. ಜನರು ಬೆಂಬಲ ಕೊಡದಿದ್ದರೂ ನನಗೆ ಅವಕಾಶ ಕೊಟ್ಟಿದ್ದಾರೆ ಎಂದು ಸಿಎಂ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ