ವಿಧಾನಸೌಧದ ಎದುರು ಸಿನಿಮೀಯ ಘಟನೆ! ಶಾಸಕ ಪ್ರತಾಪ್ ಗೌಡ ಕೈಹಿಡಿದು ಕರೆದೊಯ್ದ ಡಿಕೆಶಿ!

ಶನಿವಾರ, 19 ಮೇ 2018 (14:56 IST)
ಬೆಂಗಳೂರು: ಇದುವರೆಗೆ ಪಕ್ಷದ ನಾಯಕರು ಅಥವಾ ವಿಧಾನಸಭೆ ಕಲಾಪಗಳಿಗೆ ಬಾರದೇ ಓಡಾಡಿದ್ದ ಶಾಸಕ ಪ್ರತಾಪ್ ಗೌಡ ವಿಧಾನಸೌಧದ ಎದುರು ಪೊಲೀಸ್ ಬೆಂಗಾವಲಿನೊಂದಿಗೆ ಬರುತ್ತಿದ್ದಂತೇ ಸಿನಿಮೀಯ ಘಟನೆ ನಡೆದಿದೆ.

ಪ್ರತಾಪ್ ಗೌಡ ಆಗಮನಕ್ಕೇ ಕಾಯುತ್ತಿದ್ದ ಡಿಕೆ ಶಿವಕುಮಾರ್, ಶಾಸಕರು ಪೊಲೀಸ್ ಬೆಂಗಾವಲಿನೊಂದಿಗೆ ಬಂದು ಇಳಿಯುತ್ತಿದ್ದಂತೇ ಕೈ ಹಿಡಿದು ಎಳೆದರಲ್ಲದೆ, ಬಲವಂತವಾಗಿ ಅವರ ಜೇಬಿಗೆ ವಿಪ್ ಪತ್ರ ಹಾಕಿದರು.

ಬಳಿಕ ವಿಧಾನಸೌಧದೊಳಕ್ಕೆ ಪ್ರವೇಶಿಸಿದ ಪ್ರತಾಪ್ ಗೌಡ ಮೊಗಸಾಲೆಯಲ್ಲಿ ಕುಳಿತಿದ್ದಾರೆ. ಇದಕ್ಕೂ ಮೊದಲೇ ಪಂಚತಾರಾ ಹೋಟೆಲ್ ನಿಂದ ಅವರು ಪೊಲೀಸ್ ಭದ್ರತೆಯಲ್ಲಿ ಸದನಕ್ಕೆ ಆಗಮಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ