ಕಾಲೇಜು ವ್ಯಾಪ್ತಿಗೆ ಅನ್ಯ ವ್ಯಕ್ತಿಗಳ ಪ್ರವೇಶವಿಲ್ಲ?

ಬುಧವಾರ, 16 ಫೆಬ್ರವರಿ 2022 (07:05 IST)
ಬಾಗಲಕೋಟೆ ಜಿಲ್ಲಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಪಿಯು, ಪದವಿ ಕಾಲೇಜುಗಳಿಗೆ ಪೊಲೀಸ್ ಬಿಗಿಭದ್ರತೆ ಮಾಡಲಾಗಿದೆ.
 
ಕಾಲೇಜು ವ್ಯಾಪ್ತಿಯೊಳಗೆ ಪೋಷಕರು, ಅನ್ಯ ವ್ಯಕ್ತಿಗಳು ಬರುವಂತಿಲ್ಲ. ಜಿಲ್ಲಾದ್ಯಂತ ಶಾಲಾ- ಕಾಲೇಜು ವ್ಯಾಪ್ತಿಯಲ್ಲಿ 144ನಿಷೇದಾಜ್ಞೆ ಮುಂದುವರೆದಿದೆ. ಕಾಲೇಜು ಸುತ್ತಮುತ್ತ ಗುಂಪು ಸೇರುವಂತಿಲ್ಲ.

ಯಾವುದೇ ಸಭೆ ಸಮಾರಂಭ, ಪ್ರತಿಭಟನೆ ಮಾಡುವಂತಿಲ್ಲ. ಆಯಾ ಠಾಣಾ ವ್ಯಾಪ್ತಿಯಲ್ಲಿ ಪಿಯು, ಪದವಿ ಕಾಲೇಜಿಗೆ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದೆ.ಎಲ್ಲ ಕಾಲೇಜುಗಳಲ್ಲಿ ಪೋಷಕರನ್ನು ಕರೆದು ಶಾಂತಿ ಸಭೆ ನಡೆಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ