ಸಚಿವ ನಿತಿನ್ ಗಡ್ಕರಿಯಿಂದಲೇ ಪ್ರಧಾನಿ ಮೋದಿ ಹತ್ಯೆ! ವೈರಲ್ ಆಯ್ತು ಟ್ವೀಟ್

ಸೋಮವಾರ, 11 ಜೂನ್ 2018 (08:59 IST)
ನವದೆಹಲಿ: ದೆಹಲಿಯ ಜೆಎನ್ ಯು ವಿದ್ಯಾರ್ಥಿನಿ ಶೆಹ್ಲಾ ರಶೀದ್ ಎಂಬಾಕೆಯ ಟ್ವೀಟ್ ಇದೀಗ ಕೇಂದ್ರ ಸಚಿವ ನಿತಿನ್ ಗಡ್ಕರಿ ಕೆಂಗಣ್ಣಿಗೆ ಗುರಿಯಾಗಿದೆ.

ಜೆಎನ್ ಯು ವಿದ್ಯಾರ್ಥಿನಿ ‘ಮೋದಿ ಅವರನ್ನು ಹತ್ಯೆ ಮಾಡಲು ಆರ್ ಎಸ್ಎಸ್/ನಿತನ್ ಗಡ್ಕರಿ ಅವರೇ ಸಂಚು ರೂಪಿಸಿದಂತಿದೆ. ನಂತರ ಯಾರೋ ಮುಸ್ಲಿಮರು ಅಥವಾ ಕಮ್ಯುನಿಷ್ಟರ ತಲೆಗೆ ಆರೋಪ ಕಟ್ಟಿ, ಕೊನೆಗೆ ಮುಸ್ಲಿಮರ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿಸುವ ಸಂಚು ಇರಬಹುದು’ ಎಂದು ವಿವಾದಾತ್ಮಕ ಟ್ವೀಟ್ ಮಾಡಿದ್ದಳು.

ಆಕೆಯ ಟ್ವೀಟ್ ನೋಡಿ ಸಿಟ್ಟಿಗೆದ್ದಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಆಕೆಯ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ನನ್ನ ವಿರುದ್ಧ ಅತ್ಯಂತ ಕೆಟ್ಟದಾಗಿ ಹೇಳಿಕೆ ನೀಡಿರುವ ಸಮಾಜದ್ರೋಹಿ ಶಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಗಡ್ಕರಿ ಟ್ವೀಟ್ ಮಾಡಿದ್ದಾರೆ. ಇಷ್ಟಕ್ಕೇ ಸುಮ್ಮನಾಗದ ಶೆಹ್ಲಾ, ಗಡ್ಕರಿ ಟ್ವೀಟ್ ಗೆ ಪ್ರತಿಯಾಗಿ ‘ವಿಶ್ವದ ಅತಿ ದೊಡ್ಡ ಪಕ್ಷದ ನಾಯಕರೊಬ್ಬರು ಒಂದು ವ್ಯಂಗ್ಯ ಟ್ವೀಟ್ ನ್ನು ಗಂಭೀರವಾಗಿ ಪರಿಗಣಿಸಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾಳೆ. ಇದೀಗ ಗಂಭೀರ ಸ್ವರೂಪಕ್ಕೆ ತಿರುಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ