ವಿಷ್ಣು ಸಹಸ್ರನಾಮವನ್ನು ಹನ್ನೊಂದು ದಿನ ಪಾರಾಯಣ ಮಾಡಿದರೆ ಏನಾಗುತ್ತದೆ ಗೊತ್ತಾ?

ಬುಧವಾರ, 8 ಮೇ 2019 (07:04 IST)
ಬೆಂಗಳೂರು: ಶ್ರೀಮನ್ನಾರಾಯಣನ ಅತೀ ಶ್ರೇಷ್ಠ ಸ್ತೋತ್ರಗಳಲ್ಲಿ ವಿಷ್ಣು ಸಹಸ್ರನಾಮವೂ ಒಂದು. ಈ ಸ್ತೋತ್ರವನ್ನು ನಿತ್ಯ ಪಠಣ ಮಾಡುವುದರಿಂದ ಧೈರ್ಯ, ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.


ಈ ವಿಷ್ಣು ಸಹಸ್ರನಾಮಾಳಿಯನ್ನು ಹನ್ನೊಂದು ದಿನ 11 ಬಾರಿ ಪಾರಾಯಣ ಮಾಡುವುದರಿಂದ ಧರ್ಮ, ಭಕ್ತಿ, ಜ್ಞಾನ, ಪ್ರಜ್ಞೆ, ಮೇಧಾಶಕ್ತಿ, ಧೃತಿ,ಸ್ಥಿತಿ, ಬಲ, ಶ್ರವಣ, ಮನನ, ಮತ್ತು ಮನಶ್ಶಾಂತಿ ಲಭ್ಯವಾಗುತ್ತದೆ.

ವಿಷ್ಣು ಸಹಸ್ರನಾಮ ಪಾರಾಯಣ ಮಾಡುವವರ ಮನೆ ಪಾವನವಾಗಿರುತ್ತದೆ. ಅಂತಹ ಮನೆಯಲ್ಲಿ ದುಷ್ಟ ಶಕ್ತಿಗಳು ಬರುವುದಿಲ್ಲ. ಅಲ್ಲಿ ಅಷ್ಟೈಶ್ವರ್ಯಗಳೂ ಸಿದ್ಧಿಸಿರುತ್ತವೆ ಎಂಬ ನಂಬಿಕೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ