ವನ್ಟುತ್ರೀ ವಿಷ್ಟುವರ್ಧನ ಎಂದು ಹಾಡುತ್ತಾ ಒಂದೇ ವಾರದಲ್ಲಿ ಆರು ಕೋಟಿ ಬಾಚಿದ ಖುಷಿಯಲ್ಲೇ ಚಿತ್ರವನ್ನು ತೆಲುಗಿಗೆ ರಿಮೇಕಿಸಲು ಸಿದ್ಧತೆ ನಡೆಸುತ್ತಿದ್ದಾರೆ ಕಿಚ್ಚ ಸುದೀಪ್. ಸುದೀಪ್ ಅಭಿನಯಿಸಿದ್ದ ವಿಷ್ಣುವರ್ಧನ ಪಾತ್ರಕ್ಕೆ ತೆಲುಗಿನಲ್ಲಿ ರವಿತೇಜ ಜೀವತುಂಬಲಿದ್ದಾರೆ.
ಈ ಕುರಿತು ರವಿತೇಜ-ಸುದೀಪ್ ಬಿರುಸಿನ ಮಾತುಕತೆ ನಡೆಸುತ್ತಿರುವುದಾಗಿ ಮೂಲಗಳು ತಿಳಿಸಿವೆ. ಕನ್ನಡದ 'ವಿಷ್ಣುವರ್ಧನ' ಪ್ರಾಮಾಣಿಕವಾಗಿ ದ್ವಾರಕೀಶ್ ಜೇಬು ತುಂಬಿಸಿ ಸಂತುಷ್ಟನನ್ನಾಗಿಸಿದ್ದರೆ, ತೆಲುಗಿನ ವಿಷ್ಣುವರ್ಧನ ಧೀರ ರಾಕ್ಲೈನ್ ವೆಂಕಟೇಶ್ ಕೈಬಿಡಲ್ಲ ಎಂಬ ವಿಶ್ವಾಸ ಚಿತ್ರತಂಡದ್ದು.
ಈ ನಡುವೆ 'ವಿಷ್ಣುವರ್ಧನ'ನನ್ನು ಹಿಂದಿಗೆ ರಿಮೇಕಿಸಿ ಅಮೀರ್ ಖಾನ್ನನ್ನು ನಾಯಕನನ್ನಾಗಿಸಿದ್ರೆ ಹೆಂಗೆ ಎಂಬ ಚಿಂತನೆಯಲ್ಲಿದ್ದಾರೆ ಅಶೋಕ್ ಖೇಣಿ.
ಕನ್ನಡದಲ್ಲಿ ದ್ವಾರಕೀಶ್ ನಿರ್ಮಿಸಿದ್ದರೆ, ತೆಲುಗಿನಲ್ಲಿ ರಾಕ್ಲೈನ್ ವೆಂಕಟೇಶ್ ನಿರ್ಮಿಸಲಿದ್ದಾರೆ. ಯಾವ ಭಾಷೆಯಲ್ಲಾದರೇನಂತೆ ವಿಷ್ಣುವರ್ಧನ ಎಲ್ಲರ ಜೇಬನ್ನೂ ತುಂಬಿಸಲಿ. ಏನಂತೀರ?