ಒಂದು ಹಳೆ ಚಿತ್ರ ಮೂರು ಹೊಸ ಚಿತ್ರಗಳ ಬಿಡುಗಡೆ ಇಂದು ...

ಶುಕ್ರವಾರ, 11 ಏಪ್ರಿಲ್ 2014 (09:26 IST)
PR
ಇಂದು ಒಂದು ಹಳೆಯ ಚಿತ್ರ ಸೇರಿದಂತೆ ಒಟ್ಟು ನಾಲ್ಕು ಚಿತ್ರಗಳು ಬಿಡುಗಡೆ ಆಗುತ್ತಿದೆ. 30ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ಡಾ. ವಿಷ್ಣುವರ್ಧನ್ ಅವ್ರ ಖೈದಿ ಚಿತ್ರ ಮತ್ತೊಮ್ಮೆ ಇಂದು ಬಿಡುಗಡೆ ಆಗುತ್ತಿದೆ. ಹೊಸ ಬಗೆ ತಂತ್ರಜ್ಞಾನದಿಂದ ಸಿದ್ಧ ಆಗಿದ್ದು ಚಿತ್ರವೂ ತ್ರಿವೇಣಿ ಚಿತ್ರ ಮಂದಿರದಲ್ಲಿ ಪ್ರದರ್ಶಿತವಾಗುತ್ತಿದೆ.

ಖೈದಿ ಚಿತ್ರವನ್ನು ವಿಷ್ಣುವರ್ಧನ್ ಅಭಿಮಾನಿಗಳಾದ ಗೋವಿಂದು ಮತ್ತು ಸತೀಶ್ ಬಿಡುಗಡೆ ಮಾಡುತ್ತಿದ್ದಾರೆ. ಇದು ವಿಷ್ಣು ಪ್ರೊಡಕ್ಷನ್ ನಿಂದ ಬಿಡುಗಡೆ ಆದ ಚಿತ್ರ. ಈ ಚಿತ್ರಕ್ಕೆ ಎ ಸರ್ಟಿಫಿಕೆಟ್ ಲಭ್ಯ ಆಗಿತ್ತು. ಚಿ ಉದಯ ಶಂಕರ್ ಗೀತೆಗಳು ಇದರಲ್ಲಿದೆ.ಡಾ. ವಿಷ್ಣುವರ್ಧನ್ , ಆರತಿ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಮರ್ಯಾದೆ, ಎಂದೆಂದೂ ನಿನಗಾಗಿ,ಅತಿ ಅಪರೂಪ ಚಿತ್ರಗಳು ಸಹ ತೆರೆ ಕಾಣುತ್ತಿದೆ.

@ಎಂದೆಂದೂ ನಿನಗಾಗಿ : ಇದು ತಮಿಳು ರೀಮೇಕ್ ಚಿತ್ರವಾಗಿದೆ. ಈ ಚಿತ್ರದಲ್ಲಿ ವಿ. ರವಿಚಂದ್ರನ್ ಸಹೋದರಿಯ ಮಗ ವಿವೇಕ್ ಚಿತ್ರದ ಹೀರೋ. ದೀಪ ಸನ್ನಿಧಿ ಈ ಚಿತ್ರದ ಹೀರೋಯಿನ್.
ಅನೀಶ್ ಮತ್ತು ಸಿಂಧು ಲೋಕನಾಥ್ ಸಹ ಈ ಚಿತ್ರ ಮತ್ತೊಂದು ಜೋಡಿ.

PR
ಸನ್ ರೈಸ್ ಪ್ರೊಡಕ್ಷನ್ ಚಿತ್ರವನ್ನು ಎ. ನರಸಿಂಹನ್ ಮತ್ತು ಶ್ರೀಮತಿ ವಿಜಯ ನಿರ್ಮಿಸಿದ್ದಾರೆ. ಮಹೇಶ್ ರಾವ್ ಇದರ ನಿರ್ದೇಶನ ಮಾಡಿದ್ದಾರೆ.

ಸಂಗೀತ ವಿ. ಹರಿಕೃಷ್ಣ ಕ್ಯಾಮೆರಾ - ಜೈ ಆನಂದ್ @ ಮರ್ಯಾದೆ : ಮಹಾರಾಜ ನಿರ್ದೇಶನದಲ್ಲಿ ತಯಾರಾದ ಚಿತ್ರ. ನಾಗರಾಜ ಇದರ ನಿರ್ಮಾಪಕರು ಸತ್ಯಾನಂದ ಚಿತ್ರದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದ ರವಿಚೇತನ್ ಇಲ್ಲಿ ಸಹ ಲೀಡ್ ರೋಲ್ ಮಾಡಿದ್ದಾರೆ.

@ಅತಿ ಅಪರೂಪ - ದಿನೇಶ್ ಬಾಬು ಅವರ ಕಥೆ, ಚಿತ್ರಕಥೆಯನ್ನು ಹಾಗೂ ನಿರ್ದೇಶನ ಈ ಚಿತ್ರವೂ ತನ್ನ ಕೆಲಸ ಆರಂಭ ಮಾಡಿ ನಾಲ್ಕು ವರ್ಷಗಳಾಗಿವೆ. ಈಗ ಅದು ಬಿಡುಗಡೆ ಕಾಣುತ್ತಿದೆ. ಪ್ರೇಂ ಮತ್ತು ಐ೦ದ್ರಿತ ಮುಖ್ಯ ಭೂಮಿಕೆಯಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ