ಕಾಲಿವುಡ್ ನಲ್ಲಿ ಅವಕಾಶಗಳು ಇಲ್ಲದ ಕಾರಣ ನಯನತಾರ ಹೈದರಾಬಾದ್ ಗೆ ತನ್ನ ವಾಸ್ತವ್ಯ ಬದಲಾಯಿಸ್ದುತ್ತಿದ್ದಾಳೆ ಎನ್ನುವುದು ಈಗ ನಯನತಾರ ಬಗ್ಗೆ ಹರಡಿರುವ ರೂಮರ್.
ಆಕೆಗೆ ತಮಿಳು ಚಿತ್ರರಂಗದಲ್ಲಿ ಅವಕಾಶಗಳ ಕೊರತೆ ಇದೆ, ಆದರೆ ತೆಲುಗು ಇಂಡಸ್ಟ್ರಿಯವರಿಗೆ ಆಕೆಯನ್ನು ಕಂಡರೆ ಇಷ್ಟ, ಆದ ಕಾರಣ ಇಲ್ಲಿ ಇರೋದಕ್ಕಿಂತ ಅಲ್ಲಿಗೆ ಹೋಗೋದು ಸರಿಯಾದ ನಿರ್ಧಾರ ಎಂದು ತಿಳಿದು ಆಕೆ ಹೈದರಾಬಾದ್ ಕಡೆಗೆ ಗಂಟುಮೂಟೆ ಕಟ್ಟಿ ಹೋಗುತ್ತಿದ್ದಾಳೆ ಎಂಬಿತ್ಯಾದಿಯಾಗಿ ಹೇಳಿದ್ದಾರೆ ಅನೇಕರು.
ಮುಖ್ಯವಾಗಿ ಕಾಲಿವುಡ್ ನಲ್ಲಿರುವ ಕಿರಿಯ ಹೀರೋಗಳು ನಯನ ಜೊತೆ ನಟಿಸಲು ಇಷ್ಟ ಪಡುತ್ತಿಲ್ಲ, ಆದರೆ ಹಿರಿಯ ಹೀರೋಗಳು ಆಕೆ ಜೊತೆ ಸಿನಿಮಾ ಮಾಡುತ್ತಿಲ್ಲ, ತೆಲುಗು ಚಿತ್ರರಂಗದ ಜೂನಿಯರ್ ಎಂಟಿಆರ್, ನಾಗಾರ್ಜುನ, ವೆಂಕಟೇಶ್ ರಂತಹ ಹೀರೋಗಳು ಆಕೆ ಜೊತೆ ನಟಿಸುವುದಕ್ಕೆ ಇನ್ನು ಆಸಕ್ತಿ ಕಳೆದುಕೊಂಡಿಲ್ಲ.
PR
ಆದ್ದರಿಂದ ಆಕೆ ಕಾಲಿವುಡ್ಗೆ ಬೈ ಬೈ ಹೇಳುತ್ತಿದ್ದಾಳೆ ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ಆಕೆಯ ಆಪ್ತ ಮೂಲಗಳು ಅಲ್ಲೆಗಳೆದಿವೆ .. ನಯನಳಿಗೆ ಕಾಲಿವುಡ್ ನಲ್ಲಿ ಮೂರು ಚಿತ್ರಗಳು ಕೈಲಿವೆ. ಆಕೆ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾಳೆ ಈ ಚಿತ್ರಗಳಲ್ಲಿ ನಟಿಸುವುದರಲ್ಲಿ. ಇನ್ನು ತೆಲುಗು ಇಂಡಸ್ಟ್ರಿಯಲ್ಲೂ ಸಹಿತ ಆಕೆಗೆ ಒಳ್ಳೆಯ ಅವಕಾಶಗಳು ಸಿಕ್ಕಿವೆ.
ಹಾಗಿರುವಾಗ ಆಕೆ ಅಲ್ಲಿಯೂ ನಟಿಸುತ್ತಿದ್ದಾಳೆ. ನಯನ ಚಿತ್ರ ರಂಗದಲ್ಲಿ ಸೆಟಲ್ ಆದ ನಟಿ . ಆಕೆಗೆ ಅವಕಾಶಗಳು ಇಲ್ಲ ಎನ್ನುವುದು ಸುಳ್ಳು ಸುದ್ದಿ ಅಂದಿದ್ದಾರೆ.. ಸುದ್ದಿಗೆನು ಕ್ಷಣಕ್ಕೊಂದು ಹರಡುತ್ತೆ.. ಕೇಳೋರು ಇರುವಾಗ ಹೇಳೋರಿಗೇನು ಕೊರತೆ !