ಉಪ್ಪಿ ಬ್ರಹ್ಮನ ರಾಣಿ ಪ್ರಣೀತ ಅದೃಷ್ಟ ಕಸಿದ ತಾಪ್ಸಿ ...

ಬುಧವಾರ, 16 ಏಪ್ರಿಲ್ 2014 (09:20 IST)
PR
ಅತ್ತಿಂಟಿಕಿ ದಾರೇದಿ ಮತ್ತು ಬ್ರಹ್ಮ ಚಿತ್ರದ ಮುಖಾಂತರ ಗೆಲುವು ತನ್ನದಾಗಿಸಿ ಕೊಂಡ ನಟಿ ಪ್ರಣೀತ. ಆಕೆಯು ಸ್ಯಾಂಡಲ್ ವುಡ್ ಮತ್ತು ಟಾಲಿವುಡ್ ನ ಲಕ್ಕಿ ಗರ್ಲ್ ಆಗಿದ್ದಾರೆ. ಪ್ರಣೀತ ಕನಸು ಬಾಲಿವುಡ್ ಚಿತ್ರದಲ್ಲಿ ನಟಿಸುವುದಾಗಿತ್ತು. ಆದರೆ ತಡವಾಗಿ ಹೋದದ್ದಕ್ಕೆ ಹಾಗೂ ಡೈಲಾಗ್ ತಪ್ಪು ತಪ್ಪಾಗಿ ಹೇಳಿದ ಕಾರಣ ಅವಕಾಶ ಸಿಗಲೇ ಇಲ್ಲ. ಆದರೆ ಪ್ರಣೀತ ಬಾಲಿವುಡ್ ಕೆರಿಯರ್ ಮೇಲೆ ತಾಪ್ಸಿ ಸಹ ಪ್ರಭಾವ ಬೀರುತ್ತಿದ್ದಾಳೆ. ಟಾಲಿವುಡ್ ನಲ್ಲಿ ಯಶಸ್ಸು ಸಿಗದೆ ಬಾಲಿವುಡ್ ನಲ್ಲಿ ತನ್ನ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುವ ಸಲುವಾಗಿ ಆಕೆ ಅಲ್ಲಿಯೇ ನೆಲೆ ಊರಿದ್ದಾಳೆ. ಪ್ರಸ್ತುತ ರನ್ನಿಂಗ್ ಶಾದಿ ಡಾಟ್ ಕಾಂ ಚಿತ್ರದಲ್ಲಿ ತಾಪ್ಸಿ ನಟಿಸುತ್ತಾ ಇದ್ದಾಳೆ.

ಈಗ ತಾಪ್ಸಿಗೆ ಅಕ್ಷಯ್ ಕುಮಾರ್ ಅವರ ನಟನೆ ನೀರಜ್ ಪಾಂಡೆ ನಿರ್ದೇಶನ ಚಿತ್ರದ ಸ್ಪೆಶಲ್ ಚಬ್ಬಿಸ್ ನಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಈ ಚಿತ್ರದಲ್ಲಿ ನಾಯಕಿ ಆಗುವ ಅವಕಾಶ ತಾಪ್ಸಿಗೆ ಸಿಕ್ಕಿದೆ. ಪ್ರಣೀತ ಆಸೆ ಪಟ್ಟಿದ್ದ ಪಾತ್ರ ಈಗ ತಾಪ್ಸಿ ಪಾಲಾಗಿದೆ. ಅದೃಷ್ಟದಾಟ ಅಂದ್ರೆ ಇದೆ ಅಲ್ವೇ!

ವೆಬ್ದುನಿಯಾವನ್ನು ಓದಿ