ಅಜಿತ್ ಚಿತ್ರದಿಂದ ಮತ್ತೆ ಒಂದಾದ ಹ್ಯಾರಿಸ್ -ಗೌತಂ

ಗುರುವಾರ, 17 ಏಪ್ರಿಲ್ 2014 (09:23 IST)
PR
ಟಾಲಿವುಡ್ ಪ್ರತಿಭಾವಂತರ ಸಮ್ಮಿಲನ ಆಗಲಿದೆ . ನಿರ್ದೇಶಕ ಗೌತಂ ಮೆನನ್, ನಟ ಅಜಿತ್ ಮತ್ತು ಸಂಗೀತ ನಿರ್ದೇಶಕ ಹ್ಯಾರಿಸ್ ಜಯರಾಜ್ . ಮುಂಬರುವ ಚಿತ್ರದಲ್ಲಿ ಈ ಮೂರು ಪ್ರತಿಭೆಗಳ ಸಂಗಮ ಆಗಲಿದೆ. 2008ರಲ್ಲಿ ಸೂರ್ಯ ನಟಿಸಿದ್ದ ವಾರಣಂ ಆಯಿರಂ ಚಿತ್ರವನ್ನು ಗೌತಂ ನಿರ್ದೇಶಿಸಿದ್ದಾರೆ, ಹ್ಯಾರೀಸ್ ಸಂಗೀತ ನೀಡಿದ್ದರು. ಆ ಬಳಿಕ ಈ ಜೋಡಿ ಬೇರೆಯಾಗಿದ್ದರು. ಈಗ ಮತ್ತೊಮ್ಮೆ ಅಜಿತ್ ಚಿತ್ರದ ಮುಖಾಂತರ ಒಂದಾಗಲಿದ್ದಾರೆ.

ನನಗೆ ಗೆಳೆಯ ಗೌತಂ ಜೊತೆಯಲ್ಲಿ ಮತ್ತೆ ಕೆಲಸ ಮಾಡಲು ಖುಷಿ ಅನ್ನಿಸಿದೆ. ಅಜಯ್ ಕುಮಾರ್ ನಟನೆ , ಗೌತಂ ನಿರ್ದೇಶನ ನನ್ನ ಸಂಗೀತವನ್ನು ಖಂಡಿತ ನೀವು ಎಂಜಾಯ್ ಮಾಡ್ತೀರಿ ಎಂದು ಹೇಳಿದ್ದಾರೆ ಹ್ಯಾರಿಸ್. ಇದೆ ಖುಷಿಯೂ ಗೌತಂ ಗೂ ಸಹಿತ ಆಗಿದೆ.

PR
ಅವರು ಸಹ ಟ್ವೀಟ್ ಮಾಡಿ ಆರು ಹಾಡುಗಳನ್ನು ಈ ಚಿತ್ರದಲ್ಲಿ ನೀಡಲಿದ್ದೇವೆ. ಹ್ಯಾರಿಸ್ ಜಯರಾಜ್ ಅವರ ಕಾಣಿಕೆ ಲೇಡಿಸ್ ಅಂಡ್ ಜಂಟಲ್ ಮ್ಯಾನ್ ಎಂದು ಹೇಳಿದ್ದಾರೆ.

ಒಂದು ಆಸಕ್ತಿಕರ ಸಂಗತಿ ಎಂದರೆ ಅಜಿತ್ ಅವರ ಸಿನಿಮಾಕ್ಕೆ ಮೊದಲಬಾರಿ ಹ್ಯಾರಿಸ್ ಸಂಗೀತ ನೀಡುತ್ತಿದ್ದಾರೆ. ಗೌತಂ ಹಾಗು ಹ್ಯಾರೀಸ್ ವೈಮನಸ್ಯದಿಂದ ಬೇರೆ ಆದ ಬಳಿಕ ಒಟ್ಟಿಗೆ ಕೆಲಸ ಮಾಡುತ್ತಿರುವ ಚಿತ್ರ ಇದಾಗಿದ್ದು, ಈ ಚಿತ್ರಕ್ಕೆ ಸಂಬಂಧಪಟ್ಟಂತೆ ಅನೇಕ ನಿರೀಕ್ಷೆಗಳನ್ನು ಹೊಂದಿದ್ದಾರೆ ಕಾಲಿವುಡ್ ಮಂದಿ. ನನ್ನ ಫ್ಯಾನ್ಗಳಿಗೆ, ಸಂಗೀತ ಪ್ರಿಯರಿಗೆ ನಾನು ನಿರಾಶೆ ಮಾಡಲಾರೆ ಎಂದು ಹೇಳಿದ್ದಾರೆ ಹ್ಯಾರೀಸ್.. ಒಟ್ಟಾರೆ ಎರಡು ಪ್ರತಿಭೆಗಳ ಶೀತಲಯುದ್ದಕ್ಕೆ ಅಜಿತ್ ವಿರಾಮ ಹಾಕಿ ಆ ಜೋಡಿ ಒಂದಾಗಿ ಕೆಲಸ ಮಾಡುವಂತೆ ಮಾಡಿದ್ದಾರೆ .

ವೆಬ್ದುನಿಯಾವನ್ನು ಓದಿ