ಕೆಂಡಸಂಪಿಗೆ ಘಮಲನ್ನು ಹರಡಲು ಹೊರಟಿರುವ ಸೂರಿ

ಶನಿವಾರ, 19 ಏಪ್ರಿಲ್ 2014 (10:02 IST)
PR
ಕೆಂಡಸಂಪಿಗೆ ಎನ್ನುವುದು ಸೂರಿ ನಿರ್ದೇಶಿಸುತ್ತಿರುವ ಸಿನಿಮಾದ ಹೆಸರು. ಅವರು ಮತ್ತೊಮ್ಮೆ ಹೊಸ ಪ್ರಯೋಗಳತ್ತ ಕೈ ಚಾಚಿದ್ದಾರೆ. ಅದರ ಒಟ್ಟು ಪರಿಣಾಮವೇ ಈ ಕೆಂಡ ಸಂಪಿಗೆ ಚಿತ್ರ.

ದೊಡ್ಡಮನೆ ಹುಡುಗ, ಕೆಂಡಸಂಪಿಗೆ, ಕಂಟ್ರಿ ಪಿಸ್ತೂಲು -ಈ ಮೂರು ಚಿತ್ರಗಳ ನಿರ್ದೇಶನ ಮಾಡಲು ಹೊರಟಿರುವ ಸೂರಿ ಅವರ ಮೊದಲ ನಿರ್ದೇಶನದ ಚಿತ್ರ ಯಾವುದು ಎನ್ನುವ ಸಂದೇಹಕ್ಕೆ ಉತ್ತರ ನೀಡಿದ್ದಾರೆ ಸೂರಿ.

ಪುನೀತ್‌ ರಾಜ್‌ಕುಮಾರ್‌ ನಟಿಸಲಿರುವ ದೊಡ್ಡಮನೆ ಹುಡುಗ ಚಿತ್ರಕ್ಕೂ ಇವರದ್ದೇ ಆಕ್ಷನ್ ಕಟ್. ಪ್ರಸ್ತುತ , ಪುನೀತ್ ಧೀರ ರಣವಿಕ್ರಮ ಚಿತ್ರದಲ್ಲಿ ನಟಿಸುತ್ತಿರುವುದರಿಂದ ದೊಡ್ಡಮನೆ ಹುಡುಗ ಸದ್ಯಕ್ಕೆ ಸೆಟ್ಟೇರುವುದಿಲ್ಲ. ಆದರೆ ಜೂನ್‌ ನಂತರ ಖಂಡಿತ ಅಂತಿದ್ದಾರೆ ಚಿತ್ರತಂಡ.ಅಷ್ಟರಲ್ಲಿ ಕೆಂಡಸಂಪಿಗೆಯನ್ನು ಪೂರ್ಣಗೊಳಿಸುವ ಯೋಜನೆ ಮತ್ತು ಯೋಚನೆ ಹೊಂದಿದ್ದಾರೆ ಸೂರಿ.
ಪುನೀತ್‌ ರಾಜ್‌ಕುಮಾರ್‌ ಅಭಿನಯದ ದೊಡ್ಡಮನೆ ಹುಡುಗ ಪಕ್ಕಾ ಕಮರ್ಷಿಯಲ್‌ ಸಿನಿಮಾ ಎಂದಿದ್ದಾರೆ. ಭರಪೂರ ಮನರಂಜನೆ ಇರುತ್ತದೆಯಂತೆ.. ಹಾಗಂತ ಸೂರಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ