ಯಾರಿಗೂ ನೋವು ಮಾಡೋದು ನಮ್ಮ ಉದ್ದೇಶವಲ್ಲ: ಸತೀಶ್ ನಿನಾಸಂ

ಭಾನುವಾರ, 18 ಅಕ್ಟೋಬರ್ 2020 (12:39 IST)
ಬೆಂಗಳೂರು: ತಮ್ಮ ಗೋಧ್ರಾ ಸಿನಿಮಾ ಟೈಟಲ್ ಬದಲಾಯಿಸುವಂತೆ ಸೆನ್ಸಾರ್ ಮಂಡಳಿ ಘೋಷಿಸಿರುವ ಹಿನ್ನಲೆಯಲ್ಲಿ ನಟ ನೀನಾಸಂ ಸತೀಶ್ ಸ್ಪಷ್ಟನೆಯೊಂದನ್ನು ನೀಡಿದ್ದಾರೆ.


ಯಾರ ಮನಸ್ಸಿಗೂ ನೋವು ಉಂಟು ಮಾಡುವುದು ನಮ್ಮ ಉದ್ದೇಶವಲ್ಲ. ಸೆನ್ಸಾರ್ ಮಂಡಳಿ ಸಲಹೆಯ ಮೇರೆಗೆ ಗೋಧ್ರಾ ಟೈಟಲ್ ಬದಲಾಯಿಸುತ್ತೇವೆ. ಹೊಸ ಟೈಟಲ್ ನ್ನು ಸದ್ಯದಲ್ಲೇ ಘೋಷಣೆ ಮಾಡುತ್ತೇವೆ ಎಂದು ಸತೀಶ್ ಸ್ಪಷ್ಟಪಡಿಸಿದ್ದಾರೆ. ಗೋಧ್ರಾ ಶಬ್ಧ ವಿವಾದಯುತವಾಗಿರುವುದರಿಂದ ಈ ಟೈಟಲ್ ಕೈ ಬಿಡುವಂತೆ ಸೆನ್ಸಾರ್ ಮಂಡಳಿ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ಸತೀಶ್ ಈ ಹೇಳಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ