ಸಿದ್ದರಾಮಯ್ಯ ಗೆ ಇನ್ನೂ ಕಡಿಮೆಯಾಗಿಲ್ಲ ಕಾವೇರಿ ನಿವಾಸದ ಮೇಲಿನ ವ್ಯಾಮೋಹ

ಬುಧವಾರ, 15 ಜನವರಿ 2020 (09:49 IST)
ಬೆಂಗಳೂರು : ಸಿದ್ದರಾಮಯ್ಯ ಗೆ ಕಾವೇರಿ ನಿವಾಸದ ಮೇಲಿನ ವ್ಯಾಮೋಹ ಇನ್ನು ಕಡಿಮೆಯಾಗಿಲ್ವಾ? ಎಂಬ ಪ್ರಶ್ನೆ ಇದೀಗ ಎಲ್ಲರಲ್ಲೂ ಮೂಡಿದೆ.


ಹೌದು. ಹೊಸ ಸರ್ಕಾರ ಬಂದ್ರೂ ಸಿದ್ದರಾಮಯ್ಯ  ಇನ್ನೂ ಕಾವೇರಿ ನಿವಾಸ ಖಾಲಿ ಮಾಡಲಿಲ್ಲ. ಈಗಾಗಲೇ ಮನೆ ಖಾಲಿ ಮಾಡಲು ಕಾಲಾವಕಾಶ ಕೇಳಿದ್ದು, ಅದು  ಮುಗಿದು 2 ತಿಂಗಳು ಕಳೆದರೂ ಸಿದ್ದರಾಮಯ್ಯ ಇನ್ನೂ ಮನೆ ಖಾಲಿ ಮಾಡಿಲ್ಲ.

 

ಸಿದ್ದರಾಮಯ್ಯ ವಿಪಕ್ಷ ನಾಯಕರಾದ ಮೇಲೆ ಅವರಿಗೆ ಬಿಜೆಪಿ ಸರ್ಕಾರ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಸರ್ಕಾರಿ ನಿವಾಸ ಮಂಜೂರು ಮಾಡಿದೆ.  ನೂತನ ಮನೆ ಸಂಪೂರ್ಣವಾಗಿ ಸಿದ್ದಪಡಿಸಿ ತಿಂಗಳುಗಳೇ ಕಳೆದಿದೆ. ಆದರೆ ಅವರು ಆ ಮನೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ