ಪತಿಯ ಪ್ರೀತಿ ಪಡೆಯಲು ಶುಕ್ರವಾರದಂದು ಗೃಹಿಣಿಯರು ದೇವರ ಮುಂದೆ ಈ ದೀಪ ಹಚ್ಚಿ

ಶುಕ್ರವಾರ, 8 ಫೆಬ್ರವರಿ 2019 (06:46 IST)
ಬೆಂಗಳೂರು : ಮನೆಯಲ್ಲಿ ಏನೇ ಮಾಡಿದರೂ ಮಂಗಳವಾಗುತ್ತಿದೆ, ಮಂಗಳ ಕಾರ್ಯವೇ ನಡೆಯುತ್ತಿಲ್ಲ. ಮನೆಯ ಯಜಮಾನ ಯಾವಾಗಲೂ ಸಿಡುಕುತ್ತಿದ್ದು, ತಮ್ಮ ಮೇಲೆ ಒಲವು ತೋರಿಸುತ್ತಿಲ್ಲ ಹೀಗೆ ಈ ರೀತಿ ಸಮಸ್ಯೆ ಎದುರಿಸುತ್ತಿರುವ ಗೃಹಿಣಿಯರು ಶುಕ್ರವಾರದಂದು ಈ ಕೆಲಸವೊಂದನ್ನು ಮಾಡಿ.


ಮನೆಯಲ್ಲಿ ಸುಖ,ಶಾಂತಿ, ನೆಮ್ಮದಿ, ಸಂಪತ್ತು ಸ್ಥಿರವಾಗಿ ನೆಲೆಸಲಿ ಎಂದು ಶುಕ್ರವಾರದಂದು ಹೆಚ್ಚಿನವರ ಮನೆಯಲ್ಲಿ ಮನೆಯ ಗೃಹಿಣಿಯರು ಲಕ್ಷ್ಮೀ ಪೂಜೆ ಮಾಡುತ್ತಾರೆ. ಹೀಗೆ ಮಾಡುವ  ಗೃಹಿಣೆಯರು ಶುಚಿಯಾಗಿ ರೇಷ್ಮೇ ಸೀರೆಯನ್ನುಂಟು ಕಲಶವೊಂದನ್ನು ಇಟ್ಟು, ಅರಶಿನದ ದೀಪ ಮಾಡಿ ಅದಕ್ಕೆ ತೆಂಗಿನೆಣ್ಣೆ ಹಾಕಿ ಮನೆಯ ದೇವರ ಮುಂದೆ ದೀಪ ಬೆಳಗಿ.


ನಂತರ ಮನೆಯಲ್ಲಿ ಹೆಸರುಬೇಳೆ ಪಾಯಸ ಮಾಡಿ ದೇವಿಗೆ ನೈವೇದ್ಯ ಅರ್ಪಿಸಿ. ಈ ಪ್ರಸಾದವನ್ನು ನಿಮ್ಮ ಯಜಮಾನನಿಗೆ ನೀಡಿ. ಹೀಗೆ  ಪ್ರತಿ ಶುಕ್ರವಾರ ಮಾಡಿ. ಒಟ್ಟು 15 ಶುಕ್ರವಾರ ಕಳೆಯುವುದರಲ್ಲಿ ನಿಮ್ಮ ಯಜಮಾನನ ಸಿಟ್ಟು, ಸಿಡುಕು ಕಡಿಮೆಯಾಗಿ ನಿಮ್ಮ ಮೇಲೆ ಪ್ರೀತಿ ತೋರುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ