ಹಾಲಿನಿಂದ ಹೀಗೆ ಮಾಡಿದರೆ ಈ ದೋಷಗಳು ನಿವಾರಣೆಯಾಗುತ್ತದೆಯಂತೆ

ಶನಿವಾರ, 22 ಸೆಪ್ಟಂಬರ್ 2018 (15:02 IST)
ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದಲ್ಲಿ ಹಾಲನ್ನು ಚಂದ್ರ ಗ್ರಹಕ್ಕೆ ಹೋಲಿಸಲಾಗಿದೆ. ಹಾಲು ಕುಡಿಯುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಅದೇರೀತಿ   ಜೀವನದಲ್ಲಿ ಎದುರಾಗುವ ಹಲವು ಸಮಸ್ಯೆಗಳನ್ನು ಕೂಡ ಈ ಹಾಲಿನಿಂದ ನಿವಾರಿಸಿಕೊಳ್ಳಬಹುದಂತೆ.


ಹಾಲಿಗೆ ಎಳ್ಳು ಸೇರಿಸಿ ಶಿವಲಿಂಗಕ್ಕೆ ಅರ್ಪಣೆ ಮಾಡುವುದರಿಂದ ಎಲ್ಲ ಗ್ರಹ ದೋಷ ನಿವಾರಣೆಯಾಗುತ್ತದೆ. ಹಾಗೆ ಹಾವಿಗೆ ಹಾಲು ಹಾಕುವುದರಿಂದ ರಾಹುವಿನಿಂದ ತಪ್ಪಿಸಿಕೊಳ್ಳಬಹುದು.


ದೃಷ್ಟಿ ಬಿದ್ದಿದೆ ಎನ್ನುವವರು ಈ ಉಪಾಯ ಮಾಡಿ ಯಶಸ್ಸು ಕಾಣಬಹುದಾಗಿದೆ. ಭಾನುವಾರ ರಾತ್ರಿ ಮಲಗುವ ಮೊದಲು ಒಂದು ಲೋಟ ಹಾಲನ್ನು ತಲೆಯ ಬದಿಯಲ್ಲಿಟ್ಟು ಮಲಗಿ. ಹಾಲು ಚೆಲ್ಲದಂತೆ ನೋಡಿಕೊಳ್ಳಿ. ಬೆಳಿಗ್ಗೆ ನಿತ್ಯಕರ್ಮದ ನಂತ್ರ ಹಾಲನ್ನು ಅಕೆಶಿಯಾ ಗಿಡದ ಬುಡಕ್ಕೆ ಹಾಕಿ. ಹೀಗೆ ಮಾಡುವುದರಿಂದ ಎಲ್ಲಾ ಕಾರ್ಯದಲ್ಲಿಯೂ ಯಶ ಸಿಕ್ಕಿ, ಧನ ಲಾಭವಾಗುತ್ತದೆ,
ಪದೇ ಪದೇ ಅಪಘಾತವಾಗ್ತಿದ್ದರೂ ಅದರಿಂದ ತಪ್ಪಿಸಿಕೊಳ್ಳಲು ಹಾಲನ್ನು ಬಳಸಬಹುದಾಗಿದೆ. ಶುಕ್ಲ ಪಕ್ಷದ ಮೊದಲ ಮಂಗಳವಾರ ಹಾಲಿಗೆ ಅಕ್ಕಿ ಬೆರೆಸಿ ಹರಿವ ನೀರಿನಲ್ಲಿ ಬಿಡಿ. 7 ಮಂಗಳವಾರಗಳ ಕಾಲ ಹೀಗೆ ಮಾಡ್ತಾ ಬನ್ನಿ.


ಗ್ರಹದೋಷ ಕಂಡುಬಂದಲ್ಲಿ ಸೋಮವಾರ ಬೆಳಿಗ್ಗೆ ಬೇಗ ಎದ್ದು, ಸ್ನಾನ ಮಾಡಿ, ದೇವಸ್ಥಾನಕ್ಕೆ ಹೋಗಿ ಶಿವನಿಗೆ ಹಾಲು ಅರ್ಪಿಸಿ. ಸತತ 7 ಸೋಮವಾರ ಹೀಗೆ ಮಾಡುವುದರಿಂದ ಗ್ರಹದೋಷ ನಿವಾರಣೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ