ಮನೆಯ ಸುತ್ತಮುತ್ತ ಈ ಗಿಡ ಬೆಳೆದರೆ ಅಶುಭ!

ಭಾನುವಾರ, 4 ಫೆಬ್ರವರಿ 2018 (07:05 IST)
ಬೆಂಗಳೂರು : ಮನೆಯ ಸುತ್ತ ಮುತ್ತ ಮರಗಳಿರುವುದು ಸಕಾರಾತ್ಮಕತೆಯ ಸಂಕೇತ. ವಾಸ್ತುಶಾಸ್ತ್ರ ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯ ಮುಂದಿರುವ ಕೆಲ ಮರಗಳು ಸುಖ-ಸಮೃದ್ಧಿಯನ್ನು ನೀಡುತ್ತವೆ. ಆದರೆ ಕೆಲವೊಂದು ಗಿಡಗಳು ತಾನಾಗಿಯೇ ಬೆಳೆದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ.


ಮನೆಯ ಬಳಿ ಅಥವಾ ಮನೆಯೊಳಗೆ ಅಶ್ವತ್ಥ ಗಿಡವಿದ್ದರೆ ಕುಟುಂಬದ ಸದಸ್ಯರು ನೆಮ್ಮದಿಯಾಗಿರಲು ಸಾಧ್ಯವಿಲ್ಲ. ದಿನಕ್ಕೊಂದು ಸಮಸ್ಯೆ ಹುಟ್ಟಿಕೊಳ್ಳುತ್ತದೆ. ಮನೆ ಮೇಲೆ ಇದ್ರ ನೆರಳು ಬಿದ್ದರೂ ಕೂಡ ಅಭಿವೃದ್ಧಿ ಕಷ್ಟಸಾಧ್ಯ. ವೈವಾಹಿಕ ಜೀವನ ದುಃಖಮಯವಾಗುತ್ತದೆ. ಒಂದು ವೇಳೆ ಮನೆ ಬಳಿ ಅಶ್ವತ್ಥ ಗಿಡವಿದ್ದರೆ ಅದನ್ನು ಕತ್ತರಿಸಬಾರದು. ಇದು ಹಿರಿಯರಿಗೆ ನಷ್ಟವುಂಟು ಮಾಡುತ್ತದೆ.


ನಿರ್ದಿಷ್ಟ ಕೆಲಸಕ್ಕೆ ಅಥವಾ ಪೂಜೆಗೆ ಕತ್ತರಿಸಿದ್ರೆ ಯಾವುದೇ ಅಪಾಯವಿಲ್ಲ. ಅಶ್ವತ್ಥ ಮರವನ್ನು ಕತ್ತರಿಸುವುದು ಅವಶ್ಯವಾದಲ್ಲಿ ಭಾನುವಾರ ಕತ್ತರಿಸಬೇಕು. ಸೂಕ್ತ ಸಲಹೆ ಮೇರೆಗೆ ಕತ್ತರಿಸುವುದು ಉತ್ತಮ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ