ಶನಿವಾರ ಈ 7 ವಸ್ತುಗಳನ್ನು ಖರೀದಿಸಿದರೆ ಅಶುಭವಂತೆ

ಶನಿವಾರ, 16 ಡಿಸೆಂಬರ್ 2017 (06:12 IST)
ಬೆಂಗಳೂರು: ಭಾರತೀಯ ಹಸ್ತ ಶಾಸ್ತ್ರಜ್ಞರ ಪ್ರಕಾರ ಒಬ್ಬ ವ್ಯಕ್ತಿಯ ಜೀವನದ ಮೇಲೆ ಗ್ರಹಗಳ ಗತಿ ಹಾಗೂ ಸ್ಥಾನ ಅತ್ಯಂತ ಪ್ರಭಾವ ಬೀರುತ್ತದೆಯಂತೆ. ಒಂದು ವೇಳೆ ನಮ್ಮ ಜೀವನದಲ್ಲಿ ಶನಿಗ್ರಹದ ಪ್ರಭಾವವಿದ್ದರೆ  ಇದಕ್ಕೆ ಕೆಲವು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು.


ಜ್ಯೋತಿಷ್ಯ ಶಾಸ್ತ್ರದ ಪ್ರಕಾರ  7 ವಸ್ತುಗಳನ್ನು ಶನಿವಾರ ಖರೀದಿಸಬಾರದು ಹಾಗೂ ಮನೆಗೆ ತರಬಾರದು. ಇದರಿಂದ ಆರೋಗ್ಯ ಸಮಸ್ಯೆ ಹಾಗೂ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ. ಮೊದಲನೇಯದಾಗಿ ಬದನೆಕಾಯಿಯನ್ನು ಶನಿವಾರ ಕೊಳ್ಳಬಾರದು ಹಾಗೂ ತಿನ್ನಬಾರದು. ಹಾಗೆ ಕಾಳುಮೆಣಸನ್ನು ಈ ವಾರ ಮನೆಗೆ ತೆಗೆದುಕೊಂಡು ಬರಬಾರದು. ಉಪ್ಪನ್ನು ಶನಿವಾರ ಖರೀದಿಸುವುದರಿಂದ ಆರ್ಥಿಕ ನಷ್ಟ ಉಂಟಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳುತ್ತಾರೆ.


ಶನಿವಾರ ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ಖರೀದಿಸಬಾರದು. ಅದರಲ್ಲೂ ವಾಹನಗಳನ್ನು ಖರೀದಿಸಲೇ ಬಾರದು. ಒಂದುವೇಳೆ ಖರೀದಿಸಿದರೆ ಅಪಘಾತವಾಗುವ ಸಂಭವವಿರುತ್ತದೆ. ಬೇಳೆಕಾಳುಗಳು ಶನಿದೇವರಿಗೆ ಸಂಬಂಧಿಸಿರುವುದಾದ್ದರಿಂದ ಅದನ್ನು ಶನಿವಾರ ಖರೀದಿಸಬಾರದು.ಅದರಬದಲು ಬೇರೆಯವರಿಗೆ ದಾನಮಾಡಬಹುದು ಹಾಗು ಕಾಗೆಗಳಿಗೆ ಹಾಕಬಹುದು.ಹಾಗೆ ಕಪ್ಪು ಬಣ್ಣದ ಬಟ್ಟೆಗಳನ್ನು ಶನಿವಾರ ಖರೀದಿಸಬಾರದು ಆದರೆ ಧರಿಸಬಹುದು. ಶನಿವಾರ ಸಾಸಿವೆ ಹಾಗು ಮರದ ಪೀಠೋಪಕರಣಗಳನ್ನು ಖರೀದಿಸಿ ಮನೆಗೆ ತರಬಾರದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ