ಮಹಾವಿಷ್ಣುವಿನ ಈ ಮಂತ್ರ ಹೇಳಿದರೆ ಬುದ್ಧಿ ಚುರುಕಾಗುತ್ತದೆ

Krishnaveni K

ಶನಿವಾರ, 27 ಜುಲೈ 2024 (08:36 IST)
ಬೆಂಗಳೂರು: ಮಹಾವಿಷ್ಣು ನಮ್ಮ ಜೀವನದಲ್ಲಿ ಯಶಸ್ಸು, ನೆಮ್ಮದಿಗೆ ಕಾರಣನಾಗುವನು. ಅದೂ ಆಷಾಢ ಮಾಸದಲ್ಲಿ ಮಹಾವಿಷ್ಣುವಿನ ಆರಾಧನೆ ಮಾಡುವುದು ವಿಶೇಷವಾಗಿದೆ. ಅದರಲ್ಲೂ ವಿಶೇಷವಾಗಿ ಈ ಒಂದು ಮಂತ್ರ ಹೇಳುವುದರಿಂದ ಬುದ್ಧಿ ಚುರುಕಾಗುತ್ತದೆ.

ಮಹಾವಿಷ್ಣು ಅಲಂಕಾರ ಪ್ರಿಯ. ಅದೇ ರೀತಿ ಸುಶ್ರಾವ್ಯವಾಗಿ ಹಾಡಿದರೂ ಪ್ರಸನನ್ನಾಗುತ್ತಾನೆ. ಪ್ರತಿನಿತ್ಯ ವಿಷ್ಣು ಗಾಯತ್ರಿ ಮಂತ್ರವನ್ನು ಪ್ರತಿನಿತ್ಯ ಪಠಿಸುವುದರಿಂದ ಮನಸ್ಸಿನಲ್ಲಿರುವ ಭಯ ದೂರವಾಗುತ್ತದೆ. ವಿಷ್ಣು ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ಬುದ್ಧಿ ಚುರುಕಾಗುತ್ತದೆ.

ಹೀಗಾಗಿ ಈ ಮಂತ್ರವನ್ನು ಮಕ್ಕಳಿಗೂ ಹೇಳಿಕೊಡಿ. ಇದರಿಂದ ಅವರ ಬುದ್ಧಿ ಚುರುಕಾಗಿ ಯಶಸ್ಸು ಪಡೆಯುವರು. ವಿಷ್ಣು ಗಾಯತ್ರಿ ಮಂತ್ರ ಹೀಗಿದೆ ನೋಡಿ:

ಸಶಂಖ ಚಕ್ರಂ ಸ ಕಿರೀಟ ಕುಂಡಲಂ
ಸಪೀತ ವಸ್ತ್ರಂ ಸರಸೀರು ಹೇಕ್ಷಣಂ
ಸಹಾರ ವಕ್ಷಸ್ಥಳ ಕೌಸ್ತುಭ ಶ್ರಿಯಾಂ
ನಮಾಮಿ ವಿಷ್ಣುಂ ಶಿರಸಾ ಚತುರ್ಭುಜಂ
 

ಇದು ವಿಷ್ಣುವಿನ ಪ್ರಮುಖ ಮಂತ್ರಗಳಲ್ಲಿ ಒಂದಾಗಿದೆ. ಈ ಮಂತ್ರವನ್ನು ಎಲ್ಲಾ ವಯಸ್ಸಿನವರೂ ಪ್ರತಿನಿತ್ಯ ಪಠಿಸಬೇಕು. ಇದನ್ನು ಪಠಿಸುವುದರಿಂದ ಅಂತಹ ವ್ಯಕ್ತಿಗಳ ಏಕಾಗ್ರತೆ ಹೆಚ್ಚಬಹುದು. ಬುದ್ಧಿ ಚುರುಕಾಗುವುದು ಮತ್ತು ಜೀವನದಲ್ಲಿ ಯಶಸ್ಸು ಪಡೆಯುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ