ಚಂದ್ರಗ್ರಹಣದ ವೇಳೆ ತಪ್ಪದೇ ಪಠಿಸಬೇಕಾದ ಮಂತ್ರಗಳು

Krishnaveni K

ಶನಿವಾರ, 6 ಸೆಪ್ಟಂಬರ್ 2025 (08:27 IST)
ನಾಳೆ ಚಂದ್ರಗ್ರಹಣವಿದ್ದು, ಕೆಲವು ರಾಶಿಯವರಿಗೆ ದೋಷವಿದೆ ಎಂದು ಶಾಸ್ತ್ರಜ್ಞರು ಹೇಳುತ್ತಾರೆ. ಹಾಗಿದ್ದರೆ ದೋಷ ನಿವಾರಣೆಗೆ ಚಂದ್ರಗ್ರಹಣ ಸಂದರ್ಭದಲ್ಲಿ ಯಾವ ಸ್ತೋತ್ರ ಪಠಿಸಬೇಕು ನೋಡಿ.

ಈ ಬಾರಿ ರಾಹುಗ್ರಸ್ಥ ರಕ್ತಚಂದ್ರಗ್ರಹಣವಾಗಲಿದ್ದು ಭಾರತದಲ್ಲೂ ಗೋಚರವಾಗಲಿದೆ. ಕುಂಭ, ಮೀನ, ಕರ್ಕಟಕ, ಕನ್ಯಾ ರಾಶಿಯವರಿಗೆ ಚಂದ್ರಗ್ರಹಣದಿಂದ ದೋಷವಾಗಲಿದೆ. ಹೀಗಾಗಿ ಈ ರಾಶಿಯವರು ತಪ್ಪದೇ ದೋಷ ನಿವಾರಣೆಗೆ ಪೂಜೆ ಮಾಡಬೇಕು.

ಚಂದ್ರ ಗ್ರಹಣದ ಸಮಯದಲ್ಲಿ ಈ ಮಂತ್ರಗಳನ್ನು ಹೇಳಬಹುದು.

ಓಂ  ಏಂ ಕ್ಲೀಂ ಸೌಮಾಯ ನಾಮಾಯ ನಮಃ
ಅಥವಾ
ಓಂ ಶ್ರಾಂ ಶ್ರೀಂ ಶ್ರೌಂ ಚಂದ್ರಾಯ ನಮಃ

ಅಥವಾ
ಓಂ ಕ್ಷೀರ ಪುತ್ರಾಯ ವಿದ್ಮಹೇ ಅಮೃತ ತತ್ವಾಯ ಧೀಮಹೀ
ತನ್ನೋ ಸೋಮ ಪ್ರಚೋದಯಾತ್

ಚಂದ್ರಗ್ರಹಣದ ಸಮಯದಲ್ಲಿ ಈ ಮಂತ್ರಗಳನ್ನು ಪಠಿಸುತ್ತಾ ಕಾಲ ಕಳೆದರೆ ಗ್ರಹಣದಿಂದ ಬರುವ ದೋಷಗಳಿಗೆ ತಕ್ಕಮಟ್ಟಿಗೆ ಪರಿಹಾರ ಸಿಗುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ