ನವರಾತ್ರಿಯ 9ನೇ ದಿನ ದೇವಿಗೆ ಈ ಹೂ ಹಾಗೂ ನೈವೇದ್ಯ ಅರ್ಪಿಸಿ

ಭಾನುವಾರ, 25 ಅಕ್ಟೋಬರ್ 2020 (07:24 IST)
ಬೆಂಗಳೂರು : ಇಂದು ನವರಾತ್ರಿಯ 9ನೇ ದಿನ. ಈ ದಿನ ಚಾಮುಂಡೇಶ್ವರಿ ದೇವಿಯನ್ನು ಸಿದ್ಧಿದಾತ್ರಿ ರೂಪದಲ್ಲಿ ಪೂಜಿಸುತ್ತೇವೆ. ಇಂದು ದೇವಿಗೆ ಯಾವ ಹೂಗಳಿಂದ ಹಾಗೂ ಯಾವ ನೈವೇದ್ಯದಿಂದ ಪೂಜಿಸಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.

ಇಂದು ಮನೆಯಲ್ಲಿ ಅರ್ಧನಾರೇಶ್ವರ ದೇವರ ಫೋಟೊ ಇಟ್ಟು ಪೂಜೆ ಮಾಡಿ. ಕೆಂಪು ಅಥವಾ ಹಳದಿ ಬಣ್ಣದ ಹಾಗೂ ತಾವರೆ ಹೂಗಳಿಂದ ಅಲಂಕಾರವನ್ನು ಮಾಡಿ. ಹಾಗೇ ದೇವಿಗೆ ಪೂಜೆ ಮಾಡುವಾಗ ಹಸಿರು ಅಥವಾ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸಿ ದೇವಿಗೆ ಪೂಜೆ ಮಾಡಿ.

ನೀವು ಇಂದು ದೇವಿಗೆ ಎಳ್ಳಿನಿಂದ ಮಾಡಿದ ಪದಾರ್ಥಗಳನ್ನು, ಸಕ್ಕರೆ ಮಾಡಿದ ಪೊಂಗಲ್ ನ್ನು ನೈವೇದ್ಯವಾಗಿ ಇಟ್ಟರೆ ಸಿದ್ಧಿದಾತ್ರಿ ದೇವಿಯ ಅನುಗ್ರಹವಾಗುತ್ತದೆ. ನಿಮಗೆ ಅಷ್ಟ ಸಿದ್ಧಿಗಳನ್ನು ಕರುಣಿಸುತ್ತಾಳೆ. ಇಂದು ದೇವಿಯನ್ನು ಪೂಜಿಸುವಾಗ “ಓಂ ಹ್ರೀಂ ಶ್ರೀಂ ಸಿದ್ಧಿದಾತ್ರಿ ದುರ್ಗಾಯೈ ನಮಃ” ಮಂತ್ರವನ್ನು 3, 11, 21, 108 ಬಾರಿ ಪಠಿಸಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ