ಉತ್ತಮ ಫಲಿತಾಂಶ ಸಿಗಲು ಮೀನರಾಶಿಯವರು ಈ ದೇವರಿಗೆ ಇದನ್ನು ಅರ್ಪಿಸಿ

ಗುರುವಾರ, 5 ನವೆಂಬರ್ 2020 (06:08 IST)
ಬೆಂಗಳೂರು : ಗ್ರಹಗಳ ಸ್ಥಾನ ಬದಲಾದಾಗ ಪ್ರತಿ ರಾಶಿ, ನಕ್ಷತ್ರಕ್ಕೂ ವಿಭಿನ್ನ ರೀತಿಯಲ್ಲಿ ಫಲಿತಾಂಶಗಳನ್ನು ನೀಡುತ್ತದೆ. ಆದ್ದರಿಂದ ನಿಮ್ಮ  ಜನ್ಮ ರಾಶಿ ಪ್ರಕಾರ ಪ್ರತಿಯೊಬ್ಬರೂ ಅನುಸರಿಸಬೇಕಾದ ಕೆಲವು ಪರಿಹಾರಗಳಿವೆ. ಇದರಿಂದಾಗುವ ಹಾನಿಯನ್ನು ತಪ್ಪಿಸಲು ದೇವರಿಗೆ ರಾಶಿಗನುಗುಣವಾಗಿ ಕೆಲವು ಅರ್ಪಣೆಗಳನ್ನು ಮಾಡಬೇಕಾಗುತ್ತದೆ. ಅದು ಏನು ಎಂಬುದನ್ನು ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಮೀನರಾಶಿಯಲ್ಲಿ ಜನಿಸಿದವರು ಗಣೇಶನ ಪೂಜೆ ಮಾಡಿದರೆ ಉತ್ತಮ. ಗಣೇಶನಿಗೆ ಹೂವಿನ ಹಾರವನ್ನು ಅರ್ಪಿಸಿ. ಹಾಗೇ ನಾಗದೇವತೆಗೆ ಹಾಲನ್ನು ಅರ್ಪಿಸಿದರೆ ನಿಮ್ಮ ಜೀವನ ಪಾವನವಾಗುತ್ತದೆ. ಅಲ್ಲದೇ ಈ ರಾಶಿಯಲ್ಲಿ ಜನಿಸಿದವರು ಭದ್ರಕಾಳಿಗೆ ಕೆಂಪು ಹೂವಿನ ಹಾರವನ್ನು ಅರ್ಪಿಸಿದರೆ ಜೀವನದಲ್ಲಿ ಯಶಸ್ಸು ಸಿಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ