ಇಂತಹ ಸ್ಥಳಗಳಲ್ಲಿ ಮತ್ತು ಈ ರೀತಿ ಇರುವವರಿಗೆ ಮಾತ್ರ ಲಕ್ಷ್ಮೀ ಒಲಿಯುತ್ತಾಳಂತೆ

ಬುಧವಾರ, 29 ಜನವರಿ 2020 (06:31 IST)
ಬೆಂಗಳೂರು : ಲಕ್ಷ್ಮೀ ಸಂಪತ್ತಿಗೆ ಅಧಿದೇವತೆ. ಆಕೆ ಯಾರಿಗೆ ಒಲಿಯುತ್ತಾಳೆ ಅವರ  ಮನೆಯಲ್ಲಿ ಸಂಪತ್ತು ತುಂಬಿತುಳುಕುತ್ತಿರುತ್ತದೆ. ಆದ್ದರಿಂದ ಎಲ್ಲರೂ ಲಕ್ಷ್ಮೀಯನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಾರೆ.


ಆದರೆ ಎಷ್ಟೇ ಪೂಜೆ ಪುನಸ್ಕಾರಗಳನ್ನು ಮಾಡಿದರೂ ಲಕ್ಷ್ಮೀ ಎಲ್ಲರಿಗೂ ಒಲಿಯುವುದಿಲ್ಲ. ಇಂತಹ  ಸ್ಥಳಗಳಲ್ಲಿ ಮತ್ತು ಈ ರೀತಿ ಇರುವವರಿಗೆ ಮಾತ್ರ ಲಕ್ಷ್ಮೀ ಕಟಾಕ್ಷ ದೊರೆಯುತ್ತದೆ.

ಹೌದು. ಸ್ವಚ್ಚವಾದ ಸ್ಥಳಗಳಲ್ಲಿ ಲಕ್ಷ್ಮೀ ಬಂದು ನೆಲೆಸುತ್ತಾಳೆ. ಮತ್ತು ಯಾವ ಸ್ತ್ರೀ ತನ್ನನ್ನು ಮತ್ತು ತನ್ನ ಮನೆ ಹಾಗೂ ತನ್ನ ಕುಟುಂಬದವರನ್ನು ಶುಭ್ರವಾಗಿ ಇಟ್ಟಿರುತ್ತಾಳೆಯೋ ಅವಳಲ್ಲಿ ಯಾವಾಗಲೂ ಲಕ್ಷ್ಮೀ ನೆಲೆಸಿರುತ್ತಾಳೆ. ಆದ್ದರಿಂದ ಎಲ್ಲರು ದೇಹ, ಮನೆಯನ್ನು ಶುಚಿಯಾಗಿಟ್ಟುಕೊಂಡರೆ ಅಲ್ಲಿ ಲಕ್ಷ್ಮೀ ತಾನಾಗಿಯೇ ಬಂದು ನೆಲೆಸುತ್ತಾಳೆ ಎಂದು ಪಂಡಿತರು ಹೇಳುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ