ಜಾತಕದಲ್ಲಿ ಮಂಗಳ ಗ್ರಹ ದೋಷವಿದ್ದರೆ ಈ ಸಮಸ್ಯೆ ಕಾಡುತ್ತದೆ. ಅದಕ್ಕೆ ಈ ಪರಿಹಾರ ಮಾಡಿ

ಭಾನುವಾರ, 8 ನವೆಂಬರ್ 2020 (08:09 IST)
ಬೆಂಗಳೂರು : ಗ್ರಹಗಳು ಕೂಡ ನಮ್ಮ ಆರೋಗ್ಯವನ್ನು ನಿಯಂತ್ರಿಸುತ್ತವೆ. ಆದಕಾರಣ ನೀವು ಯಾವುದೇ ಅನಾರೋಗ್ಯಕ್ಕೆ ಒಳಗಾದರೆ ಜಾತಕ ಹಾಗೂ ಜ್ಯೋತಿಷ್ಯದ ಮೂಲಕ ದೋಷಪೂರಿತ ಗ್ರಹಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಹಾಗಾದ್ರೆ ಮಂಗಳ ಗ್ರಹ ದುರ್ಬಲವಾದರೆ  ನಿಮಗೆ ಯಾವ ಸಮಸ್ಯೆ ಕಾಡುತ್ತದೆ. ಅದಕ್ಕೆ ಪರಿಹಾರವೇನು ಎಂಬುದನ್ನು ತಿಳಿದುಕೊಳ್ಳಿ.

ನಿಮ್ಮ ಜಾತಕದಲ್ಲಿ ಮಂಗಳ ಗ್ರಹ ದುರ್ಬಲವಾಗಿದ್ದರೆ ಅದು ನಿಮ್ಮನ್ನು ಹೇಡಿಗಳನ್ನಾಗಿ ಮಾಡುತ್ತದೆ. ನೀವು ಅಪಘಾತಗಳು ಮತ್ತು ಶಸ್ತ್ರಚಿಕಿತ್ಸೆಗಳನ್ನು ಎದುರಿಸಬೇಕಾಗುತ್ತದೆ. ರಕ್ತ ಹೀನತೆ, ತಲೆಗೆ ಗಾಯ, ಆಮ್ಲೀಯತೆ, ಗರ್ಭಪಾತ, ಕಡಿತ, ಸುಟ್ಟ ಗಾಯಗಳು ಮತ್ತು ಅಲರ್ಜಿಯಂತಹ ಸಮಸ್ಯೆಗಳು ಕಾಡುತ್ತವೆ.

ಈ ಸಮಸ್ಯೆ ನಿವಾರಿಸಲು ಈ ಪರಿಹಾರವನ್ನು ಮಾಡಿ. ದೇವಾಲಯಗಳಲ್ಲಿ ಸಿಹಿತಿಂಡಿಗಳನ್ನು ದಾನ ಮಾಡಿ. ನಿಮ್ಮ ಮನೆಯಲ್ಲಿ ಬೇವಿನ ಮರವನ್ನು ಬೆಳೆಸಿಕೊಳ್ಳಿ. ಹಸುಗಳಿಗೆ ಆಗಾಗ ಆಹಾರ ನೀಡಿ. ಕೆಂಪು ಬಣ್ಣದ ಕರವಸ್ತ್ರವನ್ನು ತೆಗೆದುಕೊಂಡು ಹೋಗಿ, ಮಲಗುವ ಕೋಣೆಯಲ್ಲಿ ಆನೆಯ ದಂತವನ್ನು ಇಟ್ಟುಕೊ‍ಳ್ಳಿ. ರಕ್ತದಾನ ಮಾಡಿ. ಸೇನೆ, ಮಿಲಿಟರಿ ನಿಧಿ ಮತ್ತು ರೈತರಿಗೆ ದಾನ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ